Sunday, November 11, 2018

ಚಿತ್ರಮಂದಿರದಲ್ಲಿ ನಿಜವಾದ ಫೈಟಿಂಗ್


ಚಿತ್ರಮಂದಿರದಲ್ಲಿ ನಿಜವಾದ ಫೈಟಿಂಗ್

ಸುಮಾರು 70ರ ದಶಕ, ನಾನಾಗ ಪ್ರೈಮರಿ ಶಾಲೆ ವಿದ್ಯಾರ್ಥಿ. ನಾವಿದ್ದುದು ಬೆಂಗಳೂರಿನ ಸುಂಕೇನಹಳ್ಳಿ-ಹನುಮಂತನಗರ-ಗವೀಪುರ ಅಸುಪಾಸು. ನಮಗೆ ಗೊತ್ತಿದ್ದುದು, ಸುಂಕೇನಹಳ್ಳಿಯ ಸಂಚಾರೀ ಚಿತ್ರಮಂದಿರ ರಾಜಲಕ್ಷ್ಮಿ ಟೆಂಟ್. ಚಿಕ್ಕವರಿಗೆ ಅದು ಮಾಯಾಲೋಕ. ದೊಡ್ಡಪರದೆಯ ಮೇಲೆ ರಾಜ್ ಕುಮಾರ್, ನರಸಿಂಹರಾಜು, ಬಾಲಕೃಷ್ಣ, ಮತ್ತಿತರ ಪೌರಾಣಿಕ ಮತ್ತು ಸಾಮಾಜಿಕ ಚಿತ್ರಗಳನ್ನು ನೋಡಿ ಪುಳಕಿತರಾಗುತ್ತಿದ್ದೆವು. ಆ ಸಂಚಾರಿ ಚಿತ್ರಮಂದಿರ (ಟೆಂಟ್), ಶೀಟ್ ಹೊದೆಸಿದ, ಸುತ್ತಲೂ ಟಾರ್ಪಾಲ್ ಹಾಕಿದ, ’ಕುರ್ಚಿ’ ಮತ್ತು ’ನೆಲ’ ಎಂಬ ಎರಡು ವಿಭಾಗ ಇದ್ದ ಸುಮಾರು ಇನ್ನೂರು ಅಡಿ ಉದ್ದ, ನೂರು ಅಡಿ ಅಗಲ ಇದ್ದ, ಕೊಟ್ಟಿಗೆಯಂತಹ ಸ್ಥಳ.

ಒಳಗೆ ಸಿನಿಮಾ ನಡೆಯುತ್ತಿದ್ದರೆ, ಸುತ್ತಲಿನ ಅರ್ಧ ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಳಗೆ ನಡೆಯುತ್ತಿದ್ದ ಸಂಭಾಷಣೆ, ಹಾಡು, ಫೈಟಿಂಗ್ ಶಬ್ಧ ಎಲ್ಲವೂ ಜೋರಾಗೇ ಕೇಳಿಸುತ್ತಿತ್ತು. ಒಂದು ಸಿನಿಮಾ ಬಂದರೆ, ಸುಮಾರು ಒಂದು ತಿಂಗಳವರೆಗೂ ಪ್ರದರ್ಶನ ಇರುತ್ತಿತ್ತು. ಹಾಗಾಗಿ ಸುತ್ತಲಿನ ಪಡ್ಡೆ ಹುಡುಗರೆಲ್ಲಾ ಎಲ್ಲಾ ಡೈಲಾಗ್ ಗಳನ್ನೂ, ಹಾಡುಗಳನ್ನೂ ಬಾಯಿಪಾಠ ಮಾಡಿಕೊಂಡು, ಅದರೊಂದಿಗೇ ಹೇಳಿಕೊಳ್ಳುತ್ತಿದ್ದರು. ಶಾಲೆಯಲ್ಲಿ ನನ್ನ ಸ್ನೇಹಿತರು, ಮಗ್ಗಿ ಹೇಳಲು ಮತ್ತು ಪಠ್ಯದ ಕನ್ನಡ ಪದ್ಯಗಳನ್ನು ಕಂಠಪಾಟ ಮಾಡಲಾಗದೇ, ಬೆರಳುಗಣ್ಣಿನ ಮೇಲೆ ಶಾಲಾ ಮಾಸ್ತರರಿಂದ ರೂಲು ದೊಣ್ಣೆಯ ಏಟು ತಿನ್ನುತ್ತಿದ್ದರು. ಆದರೆ, ಯಾವುದೇ ಸಿನಿಮಾ ಬಂದರೂ, ಅದರ ಎಲ್ಲಾ ಡೈಲಾಗುಗಳನ್ನೂ, ಹಾಡುಗಳನ್ನೂ, ಭಾವಾಭಿನಯದೊಂದಿಗೆ ಮಾಡುತ್ತಿದ್ದುದ್ದು ನನಗೆ ತುಂಬಾ ಆಶ್ಚರ್ಯ ತರುತ್ತಿತ್ತು. ಬಹುಶಃ, ಎಲ್ಲಾ ಪಾಠಗಳನ್ನೂ, ಸಿನಿಮಾ ಮಾಡಿದ್ದರೆ ಅವರೂ ಎಲ್ಲವನ್ನೂ ಕಂಠಪಾಟ ಮಾಡಿಕೊಂಡು ಪಾಸಾಗುತ್ತಿದ್ದರು ಎನ್ನಿಸುತ್ತದೆ.

ಇರಲಿ, ಈಗ ಈ ಚಿತ್ರ ಮಂದಿರಕ್ಕೆ ಬರೋಣ. ಇಲ್ಲಿ ಕುರ್ಚಿ ವಿಭಾಗಕ್ಕೆ ಹನ್ನೆರಡಾಣೆ (ಎಪ್ಪೆತ್ತೈದು ಪೈಸೆ). ನಮಗೆಲ್ಲಾ, ಎಂಟಾಣೆ (ಐವತ್ತು ಪೈಸೆ) ಕೊಟ್ಟು ಮುಂದಿನ ಅಂಕಣವಾದ ಮಣ್ಣಿನ ನೆಲದ ಮೇಲೆ ಕೂರಲು ಪೈಪೋಟಿ. ಓಡಿ ಹೋಗಿ ಆಯಕಟ್ಟಿನ ಜಾಗ ಹಿಡಿದು, ಸುತ್ತಲಿನ ಮರಳು ಮಿಶ್ರಿತ ಮಣ್ಣಿನ್ನು ಕೈಯನಲ್ಲಿ ಗೋರಿ ಅದರ ಎತ್ತರವನ್ನು ಜಾಸ್ತಿ ಮಾಡಿ ಅದರ ಮೇಲೆ ಕುಳಿತರೆ, ಸಿಂಹಾಸನದ ಮೇಲೆ ವಿರಾಜಮಾನನಾದಂತೆ. ಆ ನೆಲದ ಮಣ್ಣಿನಲ್ಲಿ ಬೀಡಿ ತುಂಡುಗಳು, ಎಲೆ-ಅಡಕೆ, ಹೊಗೆ ಸೊಪ್ಪು ತಿಂದು ಉಗಿದ ಚರಟ, ಕೆಲವು ಮಕ್ಕಳು ಅಲ್ಲೇ ಉಚ್ಚೆ ಹೊಯ್ದು ಅಂಟು ಅಂಟಾಗಿದ್ದು, ಜನ ಓಡಾಡಿದಾಗ ಗಪ್ಪನೆ ಈ ಮಣ್ಣಿನ ಧೂಳು ಎದ್ದು ಮೂಗಿಗೆ ಸಂಮಿಶ್ರಿತ ವಿಚಿತ್ರ ವಾಸನೆ. ನಮಗೆ ಇದು ’ಟೆಂಟ್-ವಾಸನೆ’ ಎಂದೇ  ಪರಿಚಿತ.

ಇಂತಹ ಜಾಗದಲ್ಲಿ, ಕೂತರೆ, ಸೈರನ್ನು ಕೂಗುತ್ತಿದ್ದಂತೆ, ಚಿತ್ರಮಂದಿರದ ತುಂಬಾ ಕಿವಿಗಡಚಿಕ್ಕುವ ಅತಿ ದೀರ್ಘವಾದ ಸಿಳ್ಳೆ. ನಂತರವೇ, ಬೆಳ್ಳಿ ಪರದೆಯ ಮೇಲೆ ತಿರುಪತಿ ವೆಂಕಟರಮಣನ ಚಿತ್ರ, ಮುಂದೆ ಊದುಬತ್ತಿಯ ದಟ್ಟಹೊಗೆಯ ನಡುವೆ ’ನಮೋ ವೆಂಕಟೇಶ....’ ಎಂಬ ಗೀತೆ. ಅದು ಸಿನಿಮಾ ಶುರುವಾಗುವ ಸೂಚನೆ. ನೆಲದಮೇಲೆ ಕುಳಿತವರೆಲ್ಲಾ ಕತ್ತು ಉದ್ದ ಮಾಡಿ ಪರದೆಯ ಕೆಳತುದಿಯವರೆಗೂ ಕಾಣುವಂತೆ ಹೊಸಕಾಡಿ, ಸಾಧ್ಯವಾಗದಿದ್ದರೆ, ಅಂಡಿನ ಕೆಳಗಿನ ಮಣ್ಣನ್ನು ಇನ್ನೂ ಹೆಚ್ಚಿಸಿ, ಮುಂದೆ ಎತ್ತರ ಕುಳಿತವರಿಗೆ ಬೈದು, ಸರಿ ಮಾಡುವುದರೊಳಗೆ ಹಾಡು ಮುಗಿಯುತ್ತಿತ್ತು. ನಂತರ ಸರ್ಕಾರದ ಕಾರ್ಯಕ್ರಮಗಳ ಡಾಕ್ಯುಮೆಂಟರಿ. ಅದರಲ್ಲಿ, ಓಡುತ್ತಾ ನಡೆಯುತ್ತಿದ್ದ ಮಹತ್ಮಾ ಗಾಂಧಿ, ಮಿಲಿಟರಿ ಸಮವಸ್ತ್ರದಲ್ಲಿದ್ದ ಸುಭಾಷ್ ಚಂದ್ರ ಬೋಸರ ಪರೇಡ್ ವೀಕ್ಷಿಸುವ ಚಿತ್ರಗಳು ಕಾಯಂ. ಅದರ ಹಿನ್ನೆಲೆ ಧ್ವನಿಯಂತೂ ಗಡಸು ದನಿಯ ಮೋಹಕ ಭಾವ ಸ್ಫುರಿಸುವ, ಮತ್ತೆ ಮತ್ತೆ ಕೇಳಬೇಕೆನ್ನುವ ಆಕರ್ಷಣೆ.  ಟಿ.ವಿ. ಮೊಬೈಲು ಇಲ್ಲದ ಕಾಲದಲ್ಲಿ, ಚಿತ್ರಪರದೆಯ ಮೇಲೆ ತೋರಿಸುವ ಎಲ್ಲವನ್ನೂ ಕಣ್ಣಿನಲ್ಲಿ ತುಂಬಿಕೊಂಡು ಸಂಭ್ರಮಿಸುವ ತವಕ. ನಂತರ ಜಾಹೀರಾತು, ಅದರ ನಂತರವೇ ಸಿನಿಮಾ ಶುರುವಾಗುತ್ತಿದ್ದುದು.

ನಾನಂತೂ, ಭಕ್ತ ಕನಕದಾಸ, ಭಕ್ತ ಕುಂಬಾರ, ಸತ್ಯ ಹರಿಶ್ಚಂದ್ರ, ಇಂತಹ ಚಿತ್ರಗಳನ್ನು ಮನೆಯ ಎಲ್ಲಾ ಮಂದಿಯೊಟ್ಟಿಗೆ ಹೋಗಿ ನೋಡುವಾಗ, ಅಲ್ಲಿ ಬರುವ ಎಲ್ಲಾ ದೃಶ್ಯಗಳಲ್ಲೂ, ನಾನೇ ಅಲ್ಲಿರುವಂತೆ ಭಾವಿಸಿ ತೇಲಾಡುತ್ತಿದ್ದೆ. ದುಃಖದ ಸೀನ್ ಬಂದಾಗ, ಕಣ್ಣಿನಲ್ಲಿ ನೀರು ಧಾರಾಕಾರವಾಗಿ ಹರಿದರೂ, ಅದನ್ನು ಒರೆಸಿಕೊಂಡರೆ ಎಲ್ಲಿ ಪಕ್ಕ ಕುಳಿತ ಸಹೋದರರು, ಅಮ್ಮ ಮತ್ತು ಗೆಳೆಯರು ನೋಡಿ ಆಮೇಲೆ ಗೇಲಿ ಮಾಡಿತ್ತಾರೆಂದು ಸುಮ್ಮನೆ ಕುಳಿತು ಮಿಡುಕಾಡುತ್ತಿದ್ದೆ. ಸತ್ಯ ಹರಿಶ್ಚಂದ್ರ ಮತ್ತು ಅವನಿಗೆ ಕಾಟ ಕೊಡುವ ನಕ್ಷತ್ರಿಕನ ಪಾತ್ರದಲ್ಲಿ ರಾಜ್ ಕುಮಾರ್ ಮತ್ತು ನರಸಿಂಹರಾಜು ಅವರ ಅಮೋಘ ಅಭಿನಯದಲ್ಲಿ ಅತ್ತು, ಅತ್ತು ಕಣ್ಣೆಲ್ಲಾ ಊದಿಕೊಳ್ಳುತ್ತಿತ್ತು. ಕೊನೆಯ ದೃಶ್ಯದಲ್ಲಂತೂ ಹರಿಶ್ಚಂದ್ರ ತನ್ನ ಮಗನ ಹೆಣವನ್ನು ಸುಡಲು ಬಂದ ಹೆಂಡತಿಯ ತಲೆ ಕಡಿಯುವ ಸಂಧರ್ಭ ಬಂದಾಗ, ಚಿತ್ರಮಂದಿರದಲ್ಲಿ ಹೆಂಗಳೆಯರ, ಅದರಲ್ಲೂ ಮುದುಕಿಯರ ರೋದನ, ಜೋರಾಗೇ ನಕ್ಷತ್ರಿಕನಿಗೆ ಬೈಯುವ, ಹೆದರಿ ಜೋರಾಗಿ ಕಿರುಚಿ ಅಳುವ ಸಣ್ಣ ಮಕ್ಕಳ ದೊಡ್ಡ ಗಂಟಲಿನ ಕೂಗು, ಎಲ್ಲವೂ ಸೇರಿ ಭೀಭತ್ಸ ವಾತಾವರಣವನ್ನು ಉಂಟು ಮಾಡುತ್ತಿತ್ತು.

ಹೀಗೊಮ್ಮೆ, ಚಿತ್ರದಲ್ಲಿ ಲೀನವಾಗುತ್ತಾ ಇರುವಾಗ, ಯಾವುದೋ ಸಿನಿಮಾದಲ್ಲಿ, ಹೊಡೆದಾಟದ ದೃಶ್ಯ ಮೂಡಿ ಬರಲಾರಂಭಿಸಿತು. ಸ್ವಲ್ಪ ಹೊತ್ತಿನಲ್ಲೇ, ಮಧ್ಯದಲ್ಲೆಲ್ಲೋ ’ಹೋ..ಹೋ..’ ಎಂಬ ಕೂಗಿನೊಡನೆ ಹೊಡೆದಾಟ ಶುರುವಾಯಿತು. ಮಬ್ಬುಗತ್ತಲಿನಲ್ಲಿ, ಯಾರು ಯಾರಿಗೆ ಹೊಡೆಯುತ್ತಿದ್ದಾರೆ ಎಂದು ಗೊತ್ತಾಗುವಷ್ಟರಲ್ಲಿ ಗುಂಪು ನೂಕಾಡಿಕೊಂಡು ನಾನಿದ್ದ ಜಾಗಕ್ಕೆ ಬಂದು ನನ್ನ ಮೇಲೆ ಬೀಳಲಾರಂಭಿಸಿತು. ಹೇಗೋ ಕಷ್ಟ ಪಟ್ಟು ತಪ್ಪಿಸಿಕೊಂಡೆ. ಈ ರೀತಿ ಪ್ರತಿ ಬಾರಿಯೂ ಹೊಡೆದಾಟದ ದೃಶ್ಯ ಬಂದಾಗ ನಿಜವಾದ ಫೈಟ್ ಇಲ್ಲಿ ಶುರುವಾಗುತ್ತದೆ ಎಂದೂ, ಅದನ್ನು ನಿಯಂತ್ರಿಸಲು ಬರುವ ಗಾರ್ಡ್ ಗಳು, ಸಿಕ್ಕ ಸಿಕ್ಕವರಿಗೆ ದೊಣ್ಣೆಯಲ್ಲಿ ಹೊಡೆಯುತ್ತಾರೆಂದೂ ನಂತರ ತಿಳಿಯಿತು. ಇಲ್ಲಿ ಆಗುತ್ತಿದ್ದುದೇನೆಂದರೆ, ’ಕೋದಂಡ’ ಎನ್ನುವ ಮಂದ ಬುದ್ಧಿಯ ನಡು ವಯಸ್ಸಿನ ಒಬ್ಬ ಅನಾಥ, ಚಿತ್ರಮಂದಿರಕ್ಕೆ ಯಾರಾದರೂ ದುಡ್ಡು ಕೊಟ್ಟು ಕರೆದುಕೊಂಡು ಹೋಗಲು ಗೋಗರೆಯುತ್ತಾ ಕೇಳುತ್ತಿದ್ದ. ಆತನಿಗೆ ಯಾರಾದರೂ ಹಾಗೆ ಕರೆದುಕೊಂಡು ಹೋದರೆ ಅವರ ದುರದೃಷ್ಟವೆಂದೇ ಹೇಳಬೇಕು. ಯಾವುದಾದರೂ ಫೈಟಿಂಗ್ ಸೀನ್ ಬಂದರೆ, ಉದ್ರೇಕಗೊಂಡು ಸುತ್ತ ಇದ್ದವರಿಗೆಲ್ಲಾ ಸಿಕ್ಕ ಸಿಕ್ಕವರಿಗೆಲ್ಲಾ ಹೊಡೆದು ಬಿಡುತ್ತಿದ್ದ. ಆ ಮಬ್ಬುಗತ್ತಲಿನಲ್ಲಿ ಯಾರು ಯಾರಿಗೆ ಹೊಡೆದರೆಂದು ತಿಳಿಯುವ ವ್ಯವಧಾನ ಇಲ್ಲದೇ ಎಲ್ಲರೂ ಎಲ್ಲರಿಗೂ ಹೊಡೆಯಲು ಮುನ್ನುಗ್ಗುತ್ತಿದರು. ಇದೇ ಸಂಧರ್ಭಕ್ಕೆಂದೇ ತರಿಸಿಟ್ಟಿದ್ದ ಬಾರುಕೋಲಿನಿಂದ ಗಾರ್ಡ್ ಗಳು ಯಾರೆಗೆಂದರೆ ಅವರಿಗೆ ಬೀಸುತ್ತಿದ್ದರು. ಒಟ್ಟಿನಲ್ಲಿ ಪರದೆ ಮೇಲೂ, ಅದರ ಮುಂದೆಯೂ ಭರ್ಜರಿ ಫೈಟಿಂಗ್.

ಈ ರಸಭರಿತ ಚಿತ್ರವೀಕ್ಷಣೆಯ ಸವಿನೆನಪುಗಳೆಲ್ಲವೂ, ಟಿ.ವಿ.ಯಲ್ಲಿ ಹಳೆಯ ಚಿತ್ರಗಳ ಪ್ರಸಾರ ಮಾಡಿದಾಗ, ಮನದಲ್ಲಿ ಥಟ್ಟನೆ ಮೂಡಿ ಬಂದು ಹಳೆಯ ಕಾಲಕ್ಕೆ ನಮ್ಮನ್ನು ಕೊಂಡೊಯ್ಯುತ್ತವೆ.  

Thursday, November 23, 2017

ಜಾಲತಾಣ (Internet)

           ಜಾಲತಾಣ (Internet)              

ತೆರೆದ ಜಗವು ಈ ಜಾಣ ಜಾಲತಾಣ,
ಅರಿತ-ನುರಿತವರ ಮೊಗಸಾಲೆ, ದಡ್ಡ
ಅಹಂಕಾರಿ-ದುರುಳರ ಪಡಸಾಲೆ, ನೀ
ಪೇಳ್ದಂತೆ, ನೀ ಕೇಳ್ದಂತೆ ಮಾರ್ದನಿಸುವ ಮೈದಾನವಿದು- ಅರಿಬೊಮ್ಮ

ವಿಷಯಂಗಳು ಜಗದಗಲ ವಿಸ್ತಾರ,
ದಾರಿ ತಪ್ಪಿಸುವ ಅತೀವ ಹುನ್ನಾರ,
ಸಕಲವೂ ಪುಟಿದೆದ್ದು, ಚಂಗನೆ ದಾರಿ
ತಪ್ಪಿಸಿ, ದಡ ಹತ್ತಿಸುವ, ಭ್ರಮೆಯಾವರಣ ಈ ಜಾಲತಾಣ- ಅರಿಬೊಮ್ಮ

ಮನೆ ಹಿರಿಯರು ಬೇಕೇ? ವಿಷಯ ತಿಳಿಸಲು,
ತಾನಿಲ್ಲವೇ ಸಕಲರಿಗೂ ಗುರುವು, ಕೇಳಿದಾಕ್ಷಣ,
ಕಣ್ಣು ರೆಪ್ಪೆ ಮುಚ್ಚುವುದರಲ್ಲಿ, ಬಾಲಕೃಷ್ಣನ
ಪುಟ್ಟ ಬಾಯಿಯಲ್ಲಿ ತೆರೆವ ಅನಂತವಿಶ್ವವಿದು ಜಾಲತಾಣ - ಅರಿಬೊಮ್ಮ

ಆಡುಗೆ, ನಡುಗೆ, ತೊಡುಗೆ, ನಮಗೆ, ನಿಮಗೆ
ಏನಿಲ್ಲ, ಏನುಂಟು, ಎಣಿಕೆಗೆ ಸಿಗದ ನಕ್ಷತ್ರಗಳು,
ಕೂಸು ಪಾಲಿಸುವುದೆಂತು, ಕೂತು ಉಣ್ಣುವುದೆಂತು,
ಮೈ ದಣಿಸುವುದೆಂತು, ಮನೆ ಕಟ್ಟುವುದೆಂತು, ಸಕಲಗ್ರಾಹಿ ಈ ಜಾಲತಾಣ – ಅರಿಬೊಮ್ಮ

ಅರಿತು ನಡೆದರೆ, ಸುಭದ್ರ ಮಾರ್ಗವು,ಆಭೇದ್ಯ ಗೋಡೆಯು
ಹಾದಿ ತಪ್ಪಿದರೆ, ಶಯನ ಕೋಣೆಯು ಅನ್ಯರಿಗೆ ತೆರೆದಿಹುದು,
ಅಣುಕಾಷ್ಟ ರೇಣು ವಿವರ, ಬೇಡದ ಪ್ರವರ, ಈ ಜಾಲತಾಣ, ನೀ
ಮುಚ್ಚಿಡುವುದ ಮುಚ್ಚಿಟ್ಟು, ತೋರಬಹುದಾದಷ್ಟೇ ತೋರಿ, ಧನ್ಯನಾಗು- ಅರಿಬೊಮ್ಮ

ನಿನ್ನಂದ ಚಂದವ ಅನ್ಯರಿಗೆ ತೋರುವ ಕನ್ನಡಿ,
ನಿನ್ನುತಿಯ ಕಹಳೆ ಊದುವ ಚಂದಗಾತಿ,
ತಂದೆ-ತಾಯಿ, ಗಂಡ-ಹೆಂಡತಿ-ಮಕ್ಕಳ ಹೊಗಳಿ, ಊರಿಗೆ
ತುತ್ತೂರಿಯೂದುವ, ಶತೃಗಳ ಜರೆಯುವ, ಬಹಿರಂಗ ಶೌಚಖಾನೆಯಿದು ಜಾಲತಾಣ -  ಅರಿಬೊಮ್ಮ

ಕಲಿಯದರೆ ಮುಕ್ತಿಯಿಲ್ಲ, ಕಲಿತರೆ ಕೊನೆಯಿಲ್ಲ,
ಕಲಿಸುವವರ, ಕಲಿವೀರರ, ಕುಲರಹಿತ, ಕಲಿಯುಗ ಲೋಕ,
ನಗುವ, ನಗಿಸುವ, ಅಳುವ, ಅಳಿಸುವ, ನೋವ ನುಂಗುವ,
ನಾಕ-ನರಕಗಳ ದರ್ಶನಂಗೈಯ್ಯುವ, ಮುಕ್ತಿಮಾರ್ಗವು ಈ ಜಾಲತಾಣ - ಅರಿಬೊಮ್ಮ


---ಡಾ. ಎಸ್.ಎನ್. ಶ್ರೀಧರ 

Wednesday, November 8, 2017

ಧಾರ್ಮಿಕ ಭಾವನೆಗಳ ಮೇಲೆ ಸವಾರಿ

ಧಾರ್ಮಿಕ ಭಾವನೆಗಳ ಮೇಲೆ ಸವಾರಿ

ಸಾಮಾನ್ಯ ಜನರು ಹೀಗೇಕೆ ಆಡುತ್ತಾರೆ ಎಂಬುದನ್ನು ಮನಶಾಸ್ತ್ರಜ್ಞರೇ ಹೇಳಬೇಕು. ಪರಿಚಯವಿಲ್ಲದ ಹುಡುಗಿಯೊಬ್ಬಳು ಅತ್ಯಾಚಾರಕ್ಕೊಳಗಾಗಿ ಜೀವನ್ಮರಣದ ಹೋರಾಟದಲ್ಲಿದ್ದಾಗ ಇಡೀ ದೇಶವೇ ಮೊಂಬತ್ತಿ ಹಿಡಿದು ಆಕೆಯ ಜೀವಕ್ಕಾಗಿ ಮರುಗುತ್ತದೆ. ಆಕೆಯ ಜೀವಕ್ಕೆ ಎರವಾದ ಅತ್ಯಾಚಾರಿ ಹಂತಕರಿಗೆ ನ್ಯಾಯಾಲಯ ಶಿಕ್ಷೆಯನ್ನು ಪ್ರಕಟಿಸಿದಾಗ ನಿಟ್ಟುಸಿರು ಬಿಡುತ್ತದೆ. ಅದೇ ತಾವು ನಂಬಿದ ಧಾರ್ಮಿಕ ಗುರು ಅತ್ಯಾಚಾರ ನಡೆಸಿದ್ದು, ಲೈಂಗಿಕ ಶೋಷಣೆ ನಡೆಸಿದ್ದು, ದೇಶದ ನ್ಯಾಯಾಲಯವೊಂದು ಆತನನ್ನು ತಪ್ಪಿತಸ್ಥ ಎಂದು ಘೋಷಿಸಿದಾಗ, ಗುರುವಿನ ಪರವಾಗಿ ಆತನ ಭಕ್ತರೆನಿಸಿಕೊಂಡವರು ಉಗ್ರ ಪ್ರತಿಭಟನೆ ಮಾಡುತ್ತಾರೆ. ಅದಕ್ಕಾಗಿ ದೇಶದ ಆಸ್ತಿಪಾಸ್ತಿಗಳಿಗೆ ಹಾನಿ ಮಾಡುತ್ತಾರೆ. ಪ್ರಕರಣಕ್ಕೆ ಏನೂ ಸಂಬಂಧವಿಲ್ಲದ ಸಾರ್ವಜನಿಕರ ವಾಹನಗಳಿಗೆ ಬೆಂಕಿ ಇಡುತ್ತಾರೆ. ಕಾನೂನಿಗೂ ಬೆಲೆ ಕೊಡದೇ ನಾಗರೀಕ ಸಮಾಜಕ್ಕೇ ಕಳಂಕವಾಗುತ್ತಾರೆ.

ಅಧ್ಯಾತ್ಮಿಕ ಬೋಧನೆ ಮಾಡುವ, ಪ್ರಾಪಂಚಿಕ ಸುಖಗಳನ್ನು ಬದಿಗೊತ್ತಿ ಸನ್ಯಾಸಿ ಜೀವನ ಮಾಡುವ ಮಠವೊಂದರ ಸ್ವಾಮಿಯಾಗಿರುವ ವ್ಯಕ್ತಿಯೊಬ್ಬನ ಮೇಲೆ ಅತ್ಯಾಚಾರದ ಆರೋಪಗಳು ಬಂದಾಗ, ಆತನ ಮೇಲೆ ದೂರು ನೀಡುವ ಸಂತ್ರಸ್ತೆ ತಮ್ಮ ಒಳ ಉಡುಪಿನಲ್ಲಿರುವ ಆ ಸ್ವಾಮೀಜಿಯ ವೀರ್ಯದ ಗುರುತನ್ನು ನೀಡಿ, ಅದು ಅಪರಾಧ ಪ್ರಯೋಗಾಲಯದಲ್ಲಿ ಸಾಬೀತಾದಮೇಲೂ, ಅದೇ ಸ್ವಾಮೀಜಿಯ ಉಪದೇಶಗಳಿಗೆ ಅಪಾರ ಸಂಖ್ಯೆಯ ಮಹಿಳೆಯರು ಸೇರುವುದು, ಆಶ್ಚರ್ಯವಾಗಿ ಕಾಣುತ್ತದೆ. ಕೆಳ ನ್ಯಾಯಾಲಯದಲ್ಲಿ ಅತ್ಯಾಚಾರದ ಆರೋಪಗಳನ್ನು ತಳ್ಳಿ ಹಾಕಿದರೂ, ಇದು ಒಪ್ಪಿತ ಲೈಂಗಿಕ ಸಂಪರ್ಕವಾಗುತ್ತದೆ ಎಂಬ ವ್ಯಾಖ್ಯಾನ ನೀಡಿದಾಗಲೂ, ಕೆಲವು ಕುರುಡು-ಅನುಯಾಯಿಗಳು, ಸನ್ಯಾಸಿ ಜೀವನಕ್ಕೆ ಕಳಂಕ ತಂದ ಆ ಸ್ವಾಮೀಜಿಯನ್ನೇ ವಹಿಸಿಕೊಂಡು ಮಾತನಾಡಿದಾಗ, ಸಮಾಜದ ಆರೋಗ್ಯದ ಬಗ್ಗೆ ಅನುಮಾನವಾಗುತ್ತದೆ. ತನಗೇ ಸಂಸ್ಕಾರ ಇಲ್ಲದ ’ಮಠದ ಗುರು’, ಭಕ್ತ ಮಹಿಳೆಯರಿಗೆ ’ಕನ್ಯಾ ಸಂಸ್ಕಾರ’ ನೀಡುತ್ತೇನೆಂದರೆ, ತಲೆಬಾಗಿ ನಿಲ್ಲುವ ಹೆಣ್ಣುಮಕ್ಕಳನ್ನು ಕಂಡಾಗ ಮರುಕವಾಗುತ್ತದೆ. 

ತಮ್ಮ ಧರ್ಮದಲ್ಲಿಲ್ಲದ, ಯಾವುದೇ ಮುಸ್ಲಿಂ ರಾಷ್ಟ್ರಗಳಲ್ಲಿ ಜಾರಿಯಿರದ, ಸ್ತ್ರೀ ವಿರೋಧಿ ’ಮೂರು ತಲ್ಲಾಖ್’ ಪದ್ದತಿಯ ಸಾಂವಿಧಾನತೆಯ ಬಗ್ಗೆ, ದೇಶದ ಉನ್ನತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗ, ಈ ಅನಿಷ್ಟ ಪದ್ದತಿ ಸಮರ್ಥನೆಗೆ ಕೆಲವು ಮುಸ್ಲಿಂ ಮಹಿಳೆಯರು ನಿಂತದ್ದು, ದಶಕಗಳ ಹಿಂದೆ ನಮ್ಮ ರಾಜ್ಯದಲ್ಲಿ ನಡೆಯುತ್ತಿದ್ದ ಬೆತ್ತಲೆ ಸೇವೆ ನಿಷೇಧಿಸಿದಾಗ, ನಿಷೇಧವನ್ನು ಪ್ರತಿಭಟಿಸಿದವರ ಮಂದೆಯಲ್ಲಿ ಮಹಿಳೆಯರೇ ಇದ್ದುದನ್ನು ಕಂಡಾಗ ಆಘಾತವಾಗುತ್ತದೆ. ಹಾಗೆಯೇ ಯಾವುದೋ ಚರ್ಚ್ ನಲ್ಲಿ, ಮಹಿಳಾಸಂತರ ಮೇಲೆ ಪುರುಷ ಪಾದ್ರಿಯೊಬ್ಬರು ನಡೆಸಿದ್ದರೆನ್ನಲಾದ ಲೈಂಗಿಕ ದೌರ್ಜನ್ಯದ ತನಿಖೆ ನಡೆಯುತ್ತಿರುವ ಸಂಧರ್ಭದಲ್ಲಿ, ಪಾದ್ರಿಯವರನ್ನು ವಹಿಸಿಕೊಂಡು ಕೆಲವು ಮಹಿಳಾಸಂತರು ನಿಂತಿದ್ದು ಇಂತಹದೇ ಸಂಧರ್ಭ. ಧರ್ಮದ ಮತ್ತು ದೇವರ ಭಯದ ಸೆರಿಗಿನಲ್ಲಿ ಮುಗ್ಧ ಮಹಿಳೆಯರನ್ನು ಅಂಕೆಯಲ್ಲಿಡುವ, ಅವರಲ್ಲಿ ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವನೆಯನ್ನೇ ಚಿವುಟಿಬಿಡುವ ಹುನ್ನಾರ ಎಲ್ಲಾ ಧರ್ಮಗಳಲ್ಲೂ ನಡೆಯುತ್ತಿರುವುದನ್ನು ಕಾಣುತ್ತಿದ್ದೇವೆ.    

ತಮ್ಮ ಮೈ ಮೇಲೆ ದೇವರು ಬರುತ್ತದೆಂದು, ಅದರಿಂದ ಜನರ ಸಂಕಷ್ಟಗಳಿಗೆ ಪರಿಹಾರ ನೀಡುತ್ತೇನೆಂದು ಶೋಷಿಸುವ ಪೂಜಾರಿ ವರ್ಗ ಒಂದು ಕಡೆಯಾದರೆ, ಮಠದ ಮೂಲಕ ಸಾಮ್ರಾಜ್ಯ ಕಟ್ಟಿ, ದೇಶ ವಿದೇಶಗಳಲ್ಲಿ ಭಕ್ತರ ಪಡೆಯನ್ನು ಕಟ್ಟಿ, ತೆರಿಗೆ ವಂಚನೆ ಮಾಡುತ್ತಾ, ದೇಶದ ಕಾನೂನುಗಳನ್ನು ಗಾಳಿಗೆ ತೂರುತ್ತಾ ಅಧಿಕಾರದ ಅಮಲಿನಲ್ಲಿ ತಮ್ಮನ್ನು ನಂಬಿ ಬಂದವರ ಮುಗ್ಧ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಹೈ-ಟೆಕ್ ಸ್ವಯಂ ಘೋಷಿತ ದೇವಮಾನವರು ಇನ್ನೊಂದು ಕಡೆ. ಇಂತಹವರನ್ನು ನ್ಯಾಯಾಲಯದ ಆದೇಶದಂತೆ ದೇಶದ ಕಾನೂನಿಗೆ ಅನುಗುಣವಾಗಿ ಬಂಧಿಸಲು ಸೈನ್ಯ-ಪೋಲೀಸರನ್ನು ಒಳಗೊಂಡಂತೆ ದೊಡ್ಡ ಪಡೆಯನ್ನೇ ಕಳುಹಿಸಿ, ಸಾಮಾನ್ಯ ಜನರ ತೆರಿಗೆ ಹಣದಲ್ಲಿ ಕೋಟ್ಯಾಂತರ ಹಣವನ್ನು ಪೋಲುಮಾಡಬೇಕಾಗಿರುವುದು ದುರಂತವೇ ಸರಿ. ತಮ್ಮ ಭವಿಷ್ಯವನ್ನೇ ತಿಳಿಯದ, ಆದರೆ ಊರಿಗೆಲ್ಲಾ ಭವಿಷ್ಯ ಹೇಳುತ್ತೇನೆಂದು ಸುಳ್ಳು ಹೇಳಿ, ದುಡ್ಡು ವಸೂಲಿ ಮಾಡುವ ಬುರುಡೆ ಜ್ಯೋತಿಷಿಗಳೂ, ಪಂಗಡ, ಒಳಪಂಗಡಗಳಲ್ಲಿ, ಜಾತಿ-ಪ್ರಜಾತಿಗಳಲ್ಲಿ, ವಿವಿಧ ಧರ್ಮಗಳ ಜನರ ನಡುವೆ ದ್ವೇಷ ಬೆಳೆಸುವ ಮಠದ ಸ್ವಾಮೀಜಿಗಳೂ, ವಿವಿಧ ಧರ್ಮಗುರುಗಳೂ, ಇದೇ ವರ್ಗಕ್ಕೆ ಸೇರಿದವರು. ಇನ್ನಿತರ ವರ್ಗಗಳಲ್ಲಿ, ಬರಿ ಕೈಯಲ್ಲೇ ಯಾವುದೇ ಖಾಯಿಲೆಗೂ ಸ್ಥಳದಲ್ಲೇ ದೇವರ ಮೂಲಕ ಚಿಕೆತ್ಸೆ ನೀಡುವೆವು ಎಂದು ಮುಗ್ಧ ಜನರನ್ನು ವಂಚಿಸುತ್ತಿರುವ, ಜನರನ್ನು ಸಾಮೂಹಿಕವಾಗಿ ಸನ್ನಿಗೊಳಪಡಿಸಿ, ಅವರನ್ನು ಬೇಕಾದ ಹಾಗೆ ಕುಣಿಸಿ, ತಾವು ದೈವಪುರುಷ ಎಂಬುದಾಗಿ ಬಿಂಬಿಸಿಕೊಳ್ಳುತ್ತಿರುವವರನ್ನೂ ಕಾಣುತ್ತೇವೆ.

ಜಗದ್ಗುರುಗಳು ಎನ್ನಿಸಿಕೊಂಡವರು, ತಮ್ಮದೇ ಪಂಗಡಗಳಲ್ಲಿ, ಒಳಪಂಗಡಗಳಲ್ಲಿ ಅಸಹನೆ ಹುಟ್ಟುಹಾಕುವುದನ್ನು, ದ್ವೇಷಭಾವನೆಯನ್ನು ಹರಡುವುದನ್ನು ಕಂಡಿದ್ದೇವೆ. ಸಮಾಜ ಸುಧಾರಕರು ಹಾಕಿಕೊಟ್ಟ ಆದರ್ಶಗಳನ್ನೇ ಮರೆತು, ಈ ಮಹಾನ್ ಗುರುಗಳು, ತಮ್ಮದೇ ಜಾತಿಯ ಇನ್ನೊಂದು ಪಂಗಡದ ಗುರುಗಳ ಬಗ್ಗೆ ಸಹ ಅವಹೇಳನಕಾರಿಯಾಗಿ ಸಾರ್ವಜನಿಕವಾಗಿ ಮಾತನಾಡುವುದನ್ನು ಕಂಡಾಗ ಅಸಹ್ಯ ಹುಟ್ಟುತ್ತದೆ.ಶರಣರುಎನಿಸಿಕೊಂಡವರು ಸಹ ಹೀಗೆ ರಾಗದ್ವೇಷದ, ರೋಷಾವೇಷದ ಕೆಂಡದುಂಡೆಗಳನ್ನು ಇನ್ನೊಬ್ಬ ಸಂತರ ಮೇಲೆ ತೂರುತ್ತಾರೆಂದರೆ, ಅವರು ಧಾರ್ಮಿಕತೆಯಲ್ಲಿ ಸಾಧಿಸಿದ್ದೇನೆಂಬುದು ಪ್ರಶ್ನೆಯಾಗುತ್ತದೆ. ’ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದು ಪ್ರವಚನಗಳಲ್ಲಿ ಬೋಧಿಸುವ ಧರ್ಮಗುರುಗಳು ಸಾರ್ವಜನಿಕವಾಗಿ ಕೆಟ್ಟ ಭಾಷಾ ಪ್ರಯೋಗ ಮಾಡಿದಾಗ ಜಿಗುಪ್ಸೆ ತರಿಸುತ್ತದೆ. ಜನಸಾಮಾನ್ಯರಿಗೆ ಉತ್ತಮ ಆದರ್ಶಗಳ ಬಗ್ಗೆ ಉಪನ್ಯಾಸ ಕೊಟ್ಟು ಅವರನ್ನು ತಿದ್ದುವ ಜಾಗದಲ್ಲಿರುವ ಈ ಗುರುಗಳು, ತಮ್ಮ ತಮ್ಮಲ್ಲೇ ಈ ಪರಿ ಬೈದಾಡಿಕೊಡರೆ, ಈ ಸಮಾಜದ ಗತಿಯೇನು? ಮಾನವ ಪ್ರೀತಿ, ಸಮಾನತೆ, ಕರುಣೆ, ಕ್ಷಮಾಗುಣ, ಸಹಬಾಳ್ವೆ ಇವುಗಳನ್ನು ಬೋಧಿಸಿ ಮಾರ್ಗದರ್ಶನ ಮಾಡಬೇಕಾದ ಹೊಣೆಗಾರಿಕೆಯನ್ನು ’ಶರಣರು’ ಮರೆಯದಿರಲಿ.

ಧಾರ್ಮಿಕ ಗುರುಗಳ ಬಗ್ಗೆ ನಮಗಿರುವ ಭಾವನೆಯೆಂದರೆ, ಅವರು ನಮಗೆ ತಿಳಿಯದ ಪಾರಮಾರ್ಥಿಕತೆ ಹೊಂದಿದ್ದಾರೆ, ನಮ್ಮ ಜೀವನಕ್ಕೊಂದು ಅರ್ಥ ಕೊಡುವ ಉಪದೇಶ ಕೊಡುತ್ತಾರೆ. ಜೀವ ನೊಂದಾಗ ಸಮಾಧಾನ ತರುವ ಮಾತನಾಡಿ ಸಂತೈಸುತ್ತಾರೆ. ಸಮಾಜ ಸೇವೆಗೆ ಪ್ರೇರೇಪಿಸುತ್ತಾರೆ, ಸಮಾಜವನ್ನು ತಿದ್ದುತ್ತಾರೆ, ಇತ್ಯಾದಿ. ಈಗಲೂ ಅಂತಹ ಧಾರ್ಮಿಕ ಗುರುಗಳು, ಸ್ವಾಮೀಜಿಗಳೂ ಇದ್ದಾರೆ. ಆದರೆ ಸಮಾಜದಲ್ಲಿ ಅವರ ಪ್ರಭಾವ ಕಡಿಮೆಯಾಗುತ್ತಿದೆಂದೆನಿಸುತ್ತಿದೆ. ಅವರ ಬದಲಿಗೆ ಧಿಡೀರ್ ಖ್ಯಾತಿ ಗಳಿಸುವ ಬಾಬಾಗಳಿಗೆ, ಡೋಂಗಿ ಸ್ವಾಮಿಗಳಿಗೆ, ರೋಷಾವೇಷವಾಗಿ ಸಾರ್ವಜನಿಕವಾಗಿ ಪ್ರಚೋದನಾಕಾರಿಯಾಗಿ ಮಾತನಾಡುವ ಧಾರ್ಮಿಕ ಗುರುಗಳಿಗೆ ಮಣೆ ಹಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಈ ಸ್ವಯಂಘೋಷಿತ ಗುರುಗಳು ಮುಗ್ಧ ಜನರ ಧಾರ್ಮಿಕ ನಂಬಿಕೆಗಳನ್ನು ಉಪಯೋಗಿಸಿಕೊಂಡು, ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ತಮ್ಮೆಲ್ಲಾ ಶ್ರಮ ಹಾಕಿ ಪರ್ಯಾಯ ಸಾಮ್ರಾಜ್ಯ ಕಟ್ಟಲು ತೊಡಗುತ್ತಾರೆ. ಅವರೆಲ್ಲರ ವಿಧಾನ ಒಂದೇ. ಏನಾದರೂ ಮಾಡಿ ಜನರನ್ನು ಆಕರ್ಷಿಸುವ ವಿಷಯವೊಂದನ್ನು ಆಯ್ಕೆ ಮಾಡಿಕೊಳ್ಳುವುದು. ಉದಾಹರಣೆಗೆ, ಜನರ ಭಾವನೆಗಳನ್ನು ಬಡಿದೆಬ್ಬಿಸುವ ಸ್ವಜಾತಿ/ಮತದ ಉದ್ಧಾರ, ಗೋವು ಸಂರಕ್ಷಣೆ, ಅಲ್ಲಲ್ಲಿ ತೋರಿಕೆಯ ಸಮಾಜಸೇವೆಯ ಕಾರ್ಯಕ್ರಮಗಳು, ಜನರ ಸಕಲ ಸಂಕಷ್ಟಗಳಿಗೆ ಪರಿಹಾರ ನೀಡುವ ಪ್ರಶ್ನೋತ್ತರ ಗೋಷ್ಟಿಗಳು, ಗೊತ್ತಿಲ್ಲದ ವಿಷಯಗಳ ಬಗ್ಗೆಯೂ ಪಂಡಿತರಂತೆ ಮಾತನಾಡುವ, ಹಾಗಿಲ್ಲದಿದ್ದರೆ, ಅವರ ಜಾತಿ/ಪಂಗಡದ ಮಹಾನ್ ಗುರುಗಳಂತೆ, ಪೋಷಕರಂತೆ, ಉದ್ಧಾರಕರಂತೆ, ಇಲ್ಲದಿದ್ದರೆ, ಮನ:ಶಾಂತಿ  ಬೋಧಿಸುವ ಚಿಂತಕರಂತೆ ಪೋಸು ಕೊಟ್ಟು, ಜನರನ್ನು ಆಕರ್ಷಿಸಿವುದು. ಅನೇಕ ವಿಷಯಗಳ ಬಗ್ಗೆ ವಿಚಾರಗೋಷ್ಟಿ ಏರ್ಪಡಿಸುವುದು, ಅದರಲ್ಲಿ ತಮ್ಮದೇ ವಿಚಾರಗಳನ್ನು ಬಿತ್ತುವುದು. ಇನ್ನೂ ಮುಂದಕ್ಕೆ ಹೋಗಿ ಕಾರ್ಪೋರೇಟ್ ಗಳಲ್ಲಿ ಮ್ಯಾನೇಜ್ ಮೆಂಟ್ ತರಬೇತಿ ನೀಡುವುದು. ಅದರ ಮೂಲಕ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವುದು ಮತ್ತು ಆಸ್ತಿಪಾಸ್ತಿ ಮಾಡುವುದು, ಮತ್ತು ಎಂದಿಗೂ ಆದಾಯತೆರಿಗೆ ಕಟ್ಟದೇ ಇರುವುದು. ನಂತರದ ಸರದಿಯಲ್ಲಿ, ತಮ್ಮನ್ನು ಬೆಂಬಲಿಸುವ ಹಲವು ದಲ್ಲಾಳಿಗಳು, ಪುಢಾರಿಗಳು, ಕಿರಿ-ಹಿರಿ ರಾಜಕಾರಣಿಗಳು, ಚಲನಚಿತ್ರ ನಟರುಗಳು, ಕ್ರೀಡಾಪಟುಗಳು, ಉದ್ಯಮಿಗಳು, ವೈದ್ಯರು, ಕಾಲೇಜುಗಳ ಪ್ರಾಧ್ಯಾಪಕರುಗಳು, ವಿಜ್ಞಾನಿಗಳು ಇತ್ಯಾದಿ ಮೇಲುಸ್ತರದ ಜರನ್ನು ಒಗ್ಗೂಡಿಸುವುದು. ಅವರೊಂದಿಗೆ ವೇದಿಕೆ ಹಂಚಿಕೊಂಡು, ಇತರರಲ್ಲಿ ಹೈ-ಫೈ ಭಾವನೆ ತರುವುದು. ಜೊತೆಗೆ, ಮುಖ್ಯವಾಗಿ, ರಾಜಕಾರಣಿಗಳಿಗೆ, ಉದ್ಯಮಿಗಳಿಗೆ, ಪ್ರಭಾವಿಗಳಿಗೆ ತಮ್ಮ ಮೂಲಕ ನೆಟ್ ವರ್ಕ್ ಮಾಡಿಕೊಡುವುದು. ಹಾಗಾಗಿ ಎಲ್ಲರಿಗೂ ಬೇಕಾದ ಕೇಂದ್ರ ವ್ಯಕ್ತಿಯಾಗಿ, ಯಾರೂ ಅವರನ್ನು ಪ್ರಶ್ನಿಸಲಾಗದಷ್ಟು ಎತ್ತರಕ್ಕೆ ಕೋಟೆ ಬೆಳಿಸಿಕೊಳ್ಳುವುದು.   ಇಂತಹವರಿಂದ, ಸಮಾಜದ ಸ್ವಾಸ್ಥ್ಯ ಕೆಡುವಿದಲ್ಲದೇ, ಉತ್ತಮಗೊಳುವುದಿಲ್ಲ.

ಪ್ರಖ್ಯಾತ ವಿಜ್ಞಾನಿಗಳೂ, ಪ್ರಭಾವಿ ಮಂತ್ರಿಗಳೂ, ದೇಶದ ಪ್ರಧಾನಿಗಳೂ, ರಾಷ್ಟ್ರಪತಿಗಳೂ, ಕೆಲವೊಮ್ಮೆ ನ್ಯಾಯಾಧೀಶರಗಳೂ ಸಾರ್ವಜನಿಕವಾಗಿ ಇಂತಹವರ ಪಾದಕ್ಕೆರಗಿದಾಗ ಜಿಗುಪ್ಸೆ ತರುತ್ತದೆ. ಇವರೆಲ್ಲಾ ತಮ್ಮ ಸ್ವಪ್ರಯತ್ನದಿಂದ ಸಮಾಜದಲ್ಲಿ ಮೇಲೆ ಬಂದಿದ್ದರೂ, ಏಕೆ ಹೀಗೆ ತಮ್ಮ ಏಳ್ಗೆಗೆ ತಮ್ಮ ಸಾಮರ್ಥ್ಯವನ್ನೂ, ಸ್ವಪ್ರಯತ್ನವನ್ನೂ ಮರೆತು ಇಂತಹ ಡೋಂಗಿ ಬಾಬಗಳ ಆಶೀರ್ವಾದವೇ ಕಾರಣವೆಂದು ನಂಬುತ್ತಾರೋ, ನಾ ಕಾಣೆ. ಇವರೆಲ್ಲರಿಗೂ ತಮ್ಮ ಧಾರ್ಮಿಕ ನಂಬಿಕೆಗಳನ್ನು ಹೊಂದಲು, ಖಾಸಗಿಯಾಗಿ ಧಾರ್ಮಿಕ ಆಚರಣೆ ಮಾಡಿಕೊಳ್ಳಲು ನಮ್ಮ ಸಂವಿಧಾನದಲ್ಲಿ ಅವಕಾಶವಿದೆ. ಆದರೆ, ಇದರ ಬಹಿರಂಗ ಪ್ರದರ್ಶನದಿಂದ ಒಳಿತಿಗಿಂತ ಸಮಾಜಕ್ಕೆ ಹಾನಿಯೇ ಹೆಚ್ಚು. ಸಾಂವಿಧಾನಿಕವಾಗಿ ಉನ್ನತ ಸ್ಥಾನದಲ್ಲಿರುವ ನ್ಯಾಯಾಧೀಶರುಗಳು, ರಾಷ್ಟ್ರಪತಿಗಳು ಸಾರ್ವಜನಿಕ ವೇದಿಕೆಗಳಲ್ಲಿ, ಈ ’ದೇವಮಾನವರ’ ಜೊತೆ ಕೆಳಸ್ಥಾನದಲ್ಲಿರುವ ಆಸನ ಹಂಚಿಕೊಂಡು ಕುಳಿತಾಗ ಮನಸಿಗೆ ಕಸಿವಿಸಿಯಾಗುತ್ತದೆ. ಇಂತಹ ಪ್ರಭಾವಿಗಳ ಜೊತೆಗಿರುವ ಫೋಟೋ ಪ್ರದರ್ಶನ ಮಾಡಿಕೊಂಡು, ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುತ್ತಾ, ಇನ್ನಷ್ಟು ಸಮಾಜ ವಿರೋಧಿ ಕೆಲಸಮಾಡಿಕೊಳ್ಳಲು ಈ ಕಳ್ಳ ಸ್ವಾಮಿಗಳು ಮುಂದಾಗುತ್ತಾರೆ. ಮುಂದೆದರೂ, ಈ ದೇವಮಾನವರ ವಿಚಾರಣೆ ನ್ಯಾಯಾಲಯಕ್ಕೆ ಬಂದರೆ, ಇಂತಹವರ ಮೇಲೆ ಕ್ರಮ ತೆಗೆದುಕೊಳ್ಳುವ ಸಂಧರ್ಭ ಬಂದರೆ, ಸಾರ್ವಜನಿಕವಾಗಿ ಇವರ ಕಾಲಿಗೆರೆದ ನ್ಯಾಯಧೀಶರುಗಳೂ, ರಾಷ್ಟಪತಿಗಳೂ ಹೇಗೆ ನಿರಪೇಕ್ಷ ನಿರ್ಧಾರ ತೆಗೆದುಕೊಳ್ಳಬಲ್ಲರು? 

ನಮ್ಮ ಧಾರ್ಮಿಕ ಭಾವನೆಗಳ ಮೇಲೆ ಸವಾರಿ ಮಾಡುತ್ತಾ, ಸಮಾಜಕ್ಕೆ ಕಂಟಕರಾಗಿರುವ ಇಂತಹ ಡೋಂಗಿ ಬಾಬಾಗಳನ್ನು ಬಹಿಷ್ಕರಿಸಬೇಕಾಗಿದೆ. ಇದಕ್ಕೆ ಸರಿಯಾದ ಪರಿಹಾರವೆಂದರೆ, ಸಾಮಾನ್ಯ ಜನರಾದ ನಾವು ಇಂತಹ ಸಮಾಜ ವಿರೋಧಿ ಭಾವನೆ ಬೆಳೆಸಿಕೊಂಡಿರುವ, ಸಮಾಜ ಘಾತಕ, ಸ್ವಯಂ ಘೋಷಿತ ಧರ್ಮಗುರುಗಳನ್ನು ಅಲಕ್ಷಿಸಿ, ನಮ್ಮ ಯಾವುದೇ ಧಾರ್ಮಿಕ ಆಚರಣೆಗೆ ಇಂತಹವರ ಅಗತ್ಯ ಇಲ್ಲವೆಂಬುದನ್ನು ಮನಗಂಡು, ನಮ್ಮದೇ ದಾರಿಯಲ್ಲಿ ನಾವು ನಡೆಯುವುದು. ಹಾಗೇಯೇ ಇಂತಹ ಡೋಂಗಿ ಸ್ವಾಮಿಗಳ, ಬಾಬಾಗಳ ಮೋಸದ ಬಗ್ಗೆ ಇತರರನ್ನೂ ಎಚ್ಚರಿಸುವುದು. ನಾವು ನಂಬಿದ ಭಗವಂತನನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಲು ಇಂತಹಏಜೆಂಟರಅಗತ್ಯವಿಲ್ಲದೆಂಬುದನ್ನು ಅರಿತು, ನಮ್ಮ ಕಾಯಕದಲ್ಲಿ ಶ್ರದ್ಧೆಯಿಟ್ಟು ನಮ್ಮದೇ ರೀತಿಯಲ್ಲಿ ದೇವರನ್ನು ಕಾಣುವುದು.

-----o---- 

Tuesday, November 7, 2017

ದೊಡ್ಡವರ ಅಹಂ

ದೊಡ್ಡವರ ಅಹಂ

ಇನ್ಫೋಸಿಸ್ ನ ನಾರಯಣ ಮೂರ್ತಿಯವರು, ರಾಷ್ಟ್ರಪತಿಯವರ ಇತ್ತೀಚಿನ ಭೇಟಿಯಲ್ಲಿ ತಮ್ಮ ಸಂಸ್ಥೆಯಲ್ಲಿ ಇರುವ ವಿದೇಶಿಗರಿಗೆ ಮುಜುಗರವಾಗಬಾರದೆಂದು ರಾಷ್ಟ್ರಗೀತೆಯನ್ನು ಕೇವಲ್ ವಾದ್ಯಗಳ ಟ್ಯೂನ್ ನಿಂದ ನುಡಿಸಿ ಗೌರವ ಸೂಚಿಸಲಾಯಿತೆಂದೂ, ಅದನ್ನು ಯಾರೂ ಹಾಡಲಿಲ್ಲ್ ಎಂದೂ ಪತ್ರಿಕಾಗೋಷ್ಟಿಯಲ್ಲಿ ಪ್ರಕಟಿಸಿದ್ದಕ್ಕೆ ಬಹಳಷ್ಟು ಪ್ರತಿಭಟನೆ ನಡೆಯಿತು. ಆ ನಂತರ ಸ್ಪಷ್ಟನೆ ನೀಡಿ, ವಾದ್ಯಗಳ ನಡುವೆಯೂ ರಾಷ್ಟ್ರಪತಿಗಳ ಸುತ್ತಮುತ್ತ ನಿಂತವರು ಅವರ ದನಿಗೂಡಿಸಿ ಹಾಡಿದರೆಂದೂ, ತಮ್ಮ ಮೊದಲಿನ ಹೇಳಿಕೆಗಳಿಂದ ಯಾರಿಗಾದರೂ ನೋವಾಗಿದ್ದರೆ ತಮ್ಮನ್ನು ಕ್ಷಮಿಸಬೇಕೆಂದೂ ಹೇಳಿದರು. (ಪ್ರ.ಜಾ. ಏ. 11). ಆ ನಂತರ ಜನಪ್ರಿಯ ಸಾಹಿತಿ ಎಸ್.ಎಲ್. ಬೈರಪ್ಪನವರು, ನಾರಾಯಣಮೂರ್ತಿಯವರ ನಿಲುವನ್ನು ವಹಿಸಿಕೊಂಡು ಮಾಡಿದ ಸಮರ್ಥನೆ ಮತ್ತು ಅದಕ್ಕೆ ವಿರೋಧವನ್ನು ವ್ಯಕ್ತಪಡಿಸಿದ ಸಮಾಜವಾದಿ ಲೇಖಕರೆಂದು ಗುರುತಿಸಿಕೊಂಡ ಬರಗೂರು ರಾಮಚಂದ್ರಪ್ಪನವರು ಭೈರಪ್ಪನವರ ನೆಲೆ-ಮೂಲ ಹಿಡಿದು ಜಾಲಾಡಿದ್ದೂ ಆಯಿತು. ಇದೇ ರೀತಿ ಕಾವೇರಿ ನದಿ ಪ್ರಾಧಿಕಾರದ ತೀರ್ಪನ್ನು ಬೆಂಬಲಿಸಿದ ನಾಟಕಕಾರರಾದ ಗಿರೀಶ್ ಕಾರ್ನಾಡ್ ಅವರ ಪ್ರಕರಣ, ನಂತರ ಅದಕ್ಕೆ ಅತಿಶಯದ ವಿರೋಧವೂ ನಡೆದವು. ಖ್ಯಾತ ವಿಮರ್ಶಕರೊಬ್ಬರು ತಮ್ಮೆಲ್ಲಾ ಪ್ರತಿಭೆ ಧಾರೆಯೆರೆದು ವೈಯಕ್ತಿಕ ನೆಲೆಯಲ್ಲಿ ಕಾರ್ನಾಡರನ್ನು ಖಂಡತುಂಡವಾಗಿ ಖಂಡಿಸಿದ್ದೂ ಆಯಿತು. ಯಾವುದಕ್ಕೂ ಜಗ್ಗದ ಕಾರ್ನಾಡ್, ತಮ್ಮ್ ನಿಲುವನ್ನು ಸಮರ್ಥಿಸಿಕೊಂಡಿದ್ದರು. ಇದಕ್ಕೆ ಮುಂಚೆ ಸಾಹಿತಿಯೊಬ್ಬರ ಬಗ್ಗೆ ಹಗುರವಾಗಿ ಮಾತನಾಡಿದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರು ನಂತರ ಬಹಿರಂಗ ಕ್ಷಮೆ ಯಾಚಿಸಿದ್ದರು.

            ಈ ಪ್ರಕರಣಗಳಿಂದ ಅನೇಕ ವಿಷಯಗಳನ್ನು ಅವಲೋಕಿಸಬಹುದು. ಒಬ್ಬ ಯಶಸ್ವಿ ಉದ್ಯಮಿ ಅಥವಾ ವ್ಯಕ್ತಿ ಸಾರ್ವಜನಿಕವಾಗಿ ಮಾತನಾಡುವಾಗ ಬಹಳ ಎಚ್ಚ್ರಿಕೆಯಿಂದ ಇರುವುದು ಅತ್ಯಂತ ಅವಶ್ಯಕ. ರಾಜಕಾರಣಿಗಳೂ, ಉದ್ಯಮಿಗಳೂ, ತಮ್ಮ ಅಹಂ ಬಿಟ್ಟು ಸಮಯಕ್ಕೆ ತಕ್ಕಂತೆ ತಾವೇ ಆಡಿದ ಮಾತನ್ನು ಹಿಂತೆಗೆದುಕೊಳ್ಳಬಲ್ಲ ಚತುರರು. ಕಲ್ಪನಾಲೋಕದಲ್ಲಿ ವಿಹರಿಸುವ ಸಾಹಿತಿಗಳು ಬಿದ್ದರೂ ಮೀಸೆ ಮಣ್ಣಾಗದ, ತಮ್ಮ ತಪ್ಪು ನಿಲುವು ತಮಗೇ ಗೋಚರವಾದರೂ, ಅದೇ ಸರಿಯಿಂದು ವಿತಂಡವಾದ ಮಾಡುತ್ತಾ ವಿರೋಧಿಗಳನ್ನು ವೈಯಕ್ತಿಕ ನೆಲೆಯಲ್ಲಿ ಹೀಯಾಳಿಸುತ್ತಾ, ಗೆಲುವೆಂಬ ಹುಸಿ-ಸಿಂಹಾಸನದಲ್ಲಿ ವಿರಾಜಮಾನವಾಗಬಯಸುವ ಅತಿಶಯರು. ಇದಕ್ಕೆ ಅಲ್ಲಲ್ಲಿ ಅಪವಾದ ಇರಬಹುದಾದರೂ, ಬಹುತೇಕ ಹೀಗೇ ಎಂದು ಹೇಳಬಹುದು. ಸಮಾಜಕ್ಕೆ ಉತ್ತಮ ಸಂದೇಶ ನೀಡಬಲ್ಲ ಸಾಹಿತಿಗಳು ತಮ್ಮ ವರ್ತನೆಯಲ್ಲಿ ಹೀಗೇಕೆ? ಸಾರ್ವಜನಿಕವಾಗಿ ಅತಿ ಎಚ್ಚರಿಕೆಯಿಂದ ವರ್ತಿಸಬೇಕಾದ ಅನಿವಾರ್ಯತೆಯಿದ್ದರೂ ಬಾಯಿ ಸಡಿಲಿಸಿ ಬಾಲಿಶ ಹೇಳಿಕೆಗಳನ್ನು ನೀಡುವ ಮತ್ತೆ ನಂತರ ಹಿಂತೆಗೆದುಕೊಳ್ಳುವ ಗಣ್ಯ ವ್ಯಕ್ತಿಗಲ ಹುಂಬತನ ಏಕೆ?

--ಡಾ. ಎಸ್.ಎನ್. ಶ್ರೀಧರ

ಋತುಮಾನ

ಋತು(ಮಾನ)

ನಾವು ಬಿರುಬೇಸಿಗೆಯಲ್ಲೂ
ಮೇಕಪ್ ಮಾಡುವುದ
ಬಿಡಲಿಲ್ಲ, ಏಕೆಂದರೆ,
’ನಿಜರೂಪ’ವ ಮರೆಮಾಚಬೇಕಲ್ಲ!

ಜಡಿಮಳೆಯಲ್ಲೂ ನಾವು
ಕೊಡೆಗಳ ಬಿಚ್ಚುವುದು ಬೇಕಿಲ್ಲ
ಆದರೂ ನೆನೆಯುವುದಿಲ್ಲ,
ಏಕೆಂದರೆ, ನಾವೇ ’ಛತ್ರಿ’ಗಳು ಹೌದಲ್ಲ.

ಚಳಿಗಾಲದಲ್ಲೂ ಮೈ ತೋರುವ
ಉಡುಪನ್ನೇ ತೊಡುವೆವು,
ಆದರೂ ನಡುಗುವುದಿಲ್ಲ,
ಏಕೆಂದರೆ, ನಮಗೆ ಮಾನವೆಂಬುದಿಲ್ಲ.

ದಕ್ಷ ನೌಕರ

ದಕ್ಷ ಕೆಲಸಗಾರ

ಕೈಲಾಗದ ಸಹೋದ್ಯೋಗಿ
ಬಾಸಿಗೆ ಚಾಡಿ ಚುಚ್ಚಿ,
ದಕ್ಷ ಕೆಲಸಗಾರನ
ಕೆಲಸವ ಹೀಗಳೆದು,
ತನ್ನ ಮೇಲ್ಮೈ ತೋರುವ,
ದಕ್ಷ ಕೆಲಸಗಾರನು, ತಾನು ಮಾಡಿದ
ಕೆಲಸವನ್ನಾಸ್ವಾದಿಸುತ್ತಾ
ಇನ್ನೂ ಚಂದದ ಕೆಲಸದ
ಕನಸು ಕಾಣುತ್ತಾ,
ಸುತ್ತ ಮುತ್ತಲಿನ
ಭೂತಪ್ರೇತಗಳನ್ನೇ ಮರೆವ.


ಡಾ. ಎಸ್.ಎನ್. ಶ್ರೀಧರ

ಸವಿಮುತ್ತು

ಸವಿ ಮುತ್ತು

ಭವವೆಂಬೋ ಭವದಲ್ಲಿ,
ಕಾಂಚಣದಾ ಮಾಯೆಯಲ್ಲಿ,
ಸಂಬಳದ ಬದಲಿಗೆ
ಪತಿ ಕಳುಹಿಸಿದಾ
ಸವಿಮುತ್ತು,
ಮುತ್ತಿನಾ ಮತ್ತು ನೆತ್ತಿಗೇರಿತ್ತು,
ಪತ್ನಿ ಕಳೆದವನ್ನೆಲ್ಲಾ,
ಹಾಲಿನವನಿಗೆ, ಅಂಗಡಿಯವನಿಗೆ, ಮತ್ತೆಲ್ಲರಿಗೆ ತೆತ್ತು.


ಡಾ. ಎಸ್.ಎನ್. ಶ್ರೀಧರ

ಹೆಂಡತಿಯ ತವರಿನವರು

ºÉAqÀwAiÀÄ vÀªÀj£ÀªÀgÀÄ

»ÃUÉà MAzÀÄ ¸ÁAiÀÄAPÁ® CAqÀ¯ÉAiÀÄÄvÁÛ CZÁ£ÀPÁÌV ¸ÉßûvÀ ¹Ã£À£À ªÀÄ£É ¨ÁV°UÉ §AzÀÄ ¤AwzÉÝ. ªÀÄ£ÉAiÉƼÀUÉ G¼Áî¼ÀzÀ ZÀÄ£ÁªÀuÉ ¥ÀæZÁgÀzÀ jºÀ¸Àð¯ï £ÀqÉAiÀÄÄwÛgÀĪÀAvÉ PÁt¹vÀÄ. DgÉÆÃ¥À ¥ÀævÁågÉÆÃ¥ÀUÀ¼ÀÄ eÉÆÃgÁUÉà Q«UÉ C¥ÀླྀÀÄwÛzÀݪÀÅ. EAvÀºÀzÉà ¸ÀªÀÄAiÀÄzÀ°è £À£ÀUÉ ¯Á¨sÀªÁUÀĪÀÅzÀÄ. M¼ÀUÉ JAnæ vÉUÉzÀÄPÉÆAqÀgÉ ¹Ã£À£À ºÉAqÀw, CªÀ£À ªÉÄð£À CgÉÆÃ¥ÀªÀ£É߯Áè £À£Àß ªÀÄÄAzÉ ºÉý, £À¤ßAzÀ vÀÄÑ ... vÀÄÑ..., »ÃUÁUÀ¨ÁgÀ¢vÀÄÛ. CªÀ¤UÉ §Ä¢Þ ºÉüÀÄvÉÛÃ£É ©r CwÛUÉ CAvÀ ºÉý¹PÉÆAqÀÄ, M¼Éî wAr £ÀAvÀgÀ WÀªÀÄWÀ«Ä¸ÀĪÀ PÁ¦ü vÀAzÀÄ PÉÆlÄÖ ¸ÀªÀiÁzsÁ£À¥ÀlÄÖPÉƼÀÄîvÁÛgÉ. £ÀAvÀgÀ ¹Ã£À£À£ÀÄß PÀgÉzÀÄPÉÆAqÀÄ ºÉÆgÀUÉ ºÉÆÃzÀgÉ, ºÉAUÀ¸ÀgÀ ºÀwÛgÀ eÁ¹Û ªÀiÁvÀ£ÁqÀ¨ÁgÀzÀÄ PÀuÉÆÃ! CAvÀ CªÀ¤UÀÆ ¸ÀªÀiÁzsÁ£À ªÀiÁr CªÀ¤AzÀ®Æ ¸À«ðøï bÁeïð DV ¹UÀgÉÃmï vÉUÉzÀÄPÉÆAqÀÄ CªÀwÛ£À Rað£À ¨Á§vÀÛ£ÀÄß G½¹PÉƼÀÄîªÉ. EzÀ£É߯Áè AiÉÆÃa¹AiÉÄà M¼ÀUÉ PÁ°mÉÖ.
¹Ã£À UÀAl®Ä ºÀjAiÀÄĪÀAvÉ PÀÆUÀÄwÛzÀÝ. ¤ªÀÄä vÀªÀj£À d£À jÃw jªÁdÄ E®èzÀªÀgÀÄ, £ÁaPÉUÉlÖ d£À.
£Á°UÉ ªÉÄÃ¯É ¸Àé®à »rvÀ EgÀ°. £À£ÀUÉ K£ÁzÀgÀÆ C¤ß. DzÀgÉ £À£Àß vÀªÀj£ÀªÀgÀ ªÉÄÃ¯É K£ÁzÀgÀÄ CAzÀgÉ £Á£ÀÄ ¸ÀĪÀÄä¤gÉÆîè. DvÀ£À ºÉAqÀwAiÀÄ C§âgÀ. ¸ÀªÀiÁzsÁ£À ... ¸ÀªÀiÁzsÁ£À ! £Á¤¢ÝãÀ®è, J¯Áè ¸Àj ªÀiÁqÉÆÃt”, £À£Àß JAnæ. vÀPÀët ¹Ã£ï §zÀ¯Á¬ÄvÀÄ. ¹Ã£À §¤Ã¤£À ªÉÄÃ¯É CAV ºÁQPÉƼÀî®Ä gÀÆ«ÄUÉ ºÉÆÃzÀ. CzÀgÀxÀð, E£ÉßöÊzÀÄ ¤«ÄµÀzÀ°è DZÉ ºÉÆÃUÉÆÃt CµÀÖgÉƼÀUÉ E°è£À gÁªÀiÁAiÀÄt ªÀÄÄV¸ÀÄ JAzÀÄ. ¹Ã£À£À ºÉAqÀw CrUÉ ªÀÄ£ÉUÉ ºÉÆÃzÀªÀgÀÄ LzÀÄ ¤«ÄµÀzÀ°è ©¹©¹ ¨ÉÆÃAqÀ vÀAzÀgÀÄ. K£ÀwÛUÉ, F ªÀÄAUÁå£ÀzÀÄ ¥Áæ§èªÀÄÄä ?”, ¨ÉÆÃAqÁ ¨Á¬ÄUɸÉzÀÄPÉÆAqÉ. §¯Éà gÀÄa EvÀÄÛ.
  ¤ªÀÄä ¸ÉßûvÀgÀzÀÄ AiÀiÁªÁUÀ®Æ CzÉà PÉlÖ §Ä¢Ý. £À£ÀÆßjUÉ ºÉÆÃV §AzÀªÀgÀÄ, £ÀªÀÄä ªÀÄ£ÉAiÀÄgÀ£ÀÄß »ÃAiÀiÁ½¸ÉÆÃzÀ®èzÉÃ, £ÀªÀÄä vÀªÀj£À ¥ÀPÀÌzÀ Hj£ÀªÀgÀ£ÀÆß »Ã£ÁªÀiÁ£À CAwzÁÝgÉ. EzÀ£É߯Áè ¸À»¹PÉÆArgÀ¨ÉÃPÁ...  bÉ .. bÉ.., ºÁUÀAzÀ£Á. CªÀ¤UÉ §Ä¢Þ ºÉüÀÄvÉÛÃ£É ©r CwÛUÉ”, ªÀiÁªÀÄÆ®Ä ¥ÀmÁQ©lÄÖ £À£Àß ¥Á°£À PÁ¦üAiÀÄ£ÀÆß VnÖ¹PÉÆAqÀÄ DZÉ £À£ÀUÁUÉà PÁ¢zÀÝ ¹Ã£À£À£ÀÄß PÀÆrPÉÆAqÉ. K£ÉÆà ªÀiÁgÁAiÀÄ ! ªÀÄvÉÛ ªÀÄvÉÛ G¥ÀZÀÄ£ÁªÀuÉ vÀgÀ ¤ªÀÄä£Éð PÀÄgÀÄPÉëÃvÀæ”, CªÀ£Éà PÉÆlÖ ¹UÀgÉÃlÄ ¨Á¬ÄUɸÉzÀÄPÉÆAqÉ.
C¯ÉÆéÃ, EªÀ¼ÀÄ £ÁªÀÅ ªÀÄzÀĪÉAiÀiÁzÁV¤AzÀ ¤ÃªÀÅ £ÀªÀÄä vÀªÀjUÉ ºÉÆÃV®è. FUÀ £À£Àß aPÀ̪ÀÄä£À ªÀÄUÀ¤UÉ ªÀÄÄAf. £Á£ÀÄ EªÀvÉÛà DZÉ PÀÆwzÁݬÄvÀÄ, §gÀĪÀAw®è, F £É¥ÀzÀ¯ÁèzÀgÀÆ ¤ÃªÀÅ ºÉÆÃV §¤ß CAvÀ MvÁÛAiÀÄ ªÀiÁrzÀ¼ÀÄ. D¦üù£À°è £À£ÀUÉ ¨ÉÃgÉ ¨ÁæAaUÉ ªÀUÀð ªÀiÁrzÁÝgÉ, ¯ÉPÀÌ¥ÀvÀæ J¯Áè ¸ÀªÀiÁ ªÀiÁqÀ¨ÉÃPÀÄ, AiÀiÁªÀÅzÀPÀÆÌ mÉÊ«Ä®è CAzÀgÀÆ ©qÀ°®è ªÀiÁgÁAiÀÄ”, UÉÆtVzÀ
 FUÉãÀÄ ? ºÉÆÃV §AzÁAiÀÄÛ¯Áè, ªÀÄvÉÛ AiÀiÁPÉ dUÀ¼À ? £À£Àß ¥Àæ±Éß.
¤£ÀUÉãÀÄ UÉÆvÀÄÛ ! CªÀ¼À Hj£ÀªÀgÀÄ, ¥ÀPÀÌzÀ Hj£ÀªÀgÀÄ J¯Áè ¸Áéyð d£À.... CªÀ¼À HgÀÄ vÀ®Ä¥ÉÇÃPÉ ªÀÄÄAZÉ £Á¤zÀÝ §¹ìUÉ ¥ÀAPÀÑgï DV C¯Éè¯ÉÆèà HgÁZÉ gÁwæ ¤AvÀÄ ºÉÆÃAiÀÄÄÛ. £À£ÀUÉÆà ¥ÀæPÁAqÀ ºÀ¹ªÁVvÀÄÛ. J®Æè K£ÀÆ EgÀ°®è. CµÉÆÖwÛUÉ C¯Éèà PÉ®¸À ªÀiÁqÀÄwÛzÀÝ CªÀ¼À ¥ÀPÀÌzÀÆj£ÀªÀgÀÄ C°èUÉ §AzÀªÀgÀÄ £À£Àß ¥ÀjZÀAiÀÄ »rzÀÄ ªÀiÁvÀ£Ár¹zÀgÀÄ.....”, C¯Éèà ªÀÄÄ®ÄPÁrzÀ.
M¼ÉîzÉà DAiÀÄÛ®è. CªÀgÀ eÉÆvÉ ªÀiÁvÀ£Ár ¤£Àß ¨ÉÆÃgÀÆ ºÉÆÃV¨ÉðÃPÀ¯Áè.... ”, gÁUÀ J¼ÉzÉ. 
¥ÀÇwð PÉüÉÆà ªÀiÁgÁAiÀiÁ ! §AzÀªÀgÀÄ K£ÁzÀgÀÆ AiÉÆÃUÀPÉëêÀÄ «ZÁj¹zÀgÁ ? CzɯÁè jÃw jªÁdÄUÀ¼À£É߯Áè PÀnÖà ClÖzÀ ªÉÄÃ¯É ºÁQgÀĪÀ d£À CªÀÅöæ. ¨ÉAUÀ¼ÀÆj£À°è ¸Àé®à PÉ®¸À EvÀÄÛ. ¤ÃªÀÅ C°è£ÀªÀgÉà C®èªÁ, £ÀªÀÄä PÉ®¸À ¸Àé®à ªÀiÁrPÉÆrÛÃgÁ CAvÀ PÉüÁÛgÀ¯Áè !  CzÀÄ PÉüÉÆà ºÉÆvÁÛ? £Á£ÀÄ ªÉÆzÀ¯Éà ºÉÆmÉÖ ºÀ¹«£À°è ¸ÁAiÀiÁÛ EzÀÝgÉ, EªÀjUÉ ¨ÉAzÀ ªÀÄ£Éà UÀ¼Á »jAiÉÆà §Ä¢Þ... ”, ¤AvÀ¯Éèà PÀÄ¢AiÀÄvÉÆqÀVzÀ.
¸ÀjÃ. DªÉÄÃ¯É HjUÉ ¸ÀjAiÀiÁV ºÉÆÃzÉ vÁ£ÉÃ. C¯Éè¯Áè ¸ÀjAiÀiÁV £ÉÆÃrPÉÆAqÀgÀÄ vÁ£Éà?PÉƱÀѤ¹zÉ.
C¯ÉèãÉÆà ¸ÀªÀiÁ ªÀiÁrzÀgÀÄ. vÀÄA¨Á ªÀµÀðUÀ¼À ªÉÄÃ¯É §wð¢Ýä CAvÀ £À£ÀUÉà MAzÀÄ gÀƪÀÄ£ÀÄß QèÃ£ï ªÀiÁr, ¸ÀÄtÚ-§tÚ ªÀiÁr, ºÁ¹UÉ M¼Éî Hl ºÁQ, J¯Áè ZÉ£ÁßUÉà £ÉÆÃrPÉÆAqÀgÀÄ. FUÀªÀ£À PÀtÚ°è ¸Àé®à ¨É¼ÀPÀÄ.
CxÀðªÁ¬ÄvÀÄ ©qÀÄ. ªÉÆ£Éß £ÀªÀÄä PÀĪÀiÁgÀ¸Áé«ÄAiÀĪÀgÀÄ ZÁªÀÄgÁd£ÀUÀgÀPÉÌ ºÉÆÃUÀĪÀªÀgÀÄ, ºÉ°PÁ¥ÀÖgÀ£ÀÄß AiÀiÁªÀÅzÉÆà PÉgÉ CAUÀ¼ÀPÉÌ E½¹zÁUÀ, C°èzÀÝ d£À CªÀgÀ AiÉÆÃUÀPÉëêÀÄ «ZÁj¸À°®è CAvÀ PÉÆgÀVzÀgÀÆ, CªÀgɯÁè £ÀªÀÄä ¥ÀæeÉUÀ¼Éà CAvÀ ¸ÀªÀiÁzsÁ£À ªÀiÁqÉÆÌAqÀgÀ¯Áè, ºÁUÉà ¤Ã£ÀÆ CªÀgÀ£ÀÄß PÀë«Ä¹©lÄÖ ªÉʤ eÉÆvÉ gÁf ªÀiÁqÉÆÌAqÀÄ gÁwæ HlPÉÌ zÁj ªÀiÁqÉÆÌÃ...”, PÀȵÀÚ ¸ÀAzsÁ£ÀzÀ J¼É vÉÆÃj¹zÉ.
ªÀÄÄRåªÀÄAwæ eÉÆvÉUÉ vÀ£ÀߣÀÄß ºÉÆð¹zÉ C£ÉÆßà RIJUÉ E£ÉÆßAzÀÄ ¹UÀgÉÃl£ÀÄß £À£ÀßqÉUÉ ZÁa, vÁ£ÀÆ E£ÉÆßAzÀ£ÀÄß ºÀaÑ ¸ÀA¨sÀæªÀÄ¥ÀqÀvÉÆqÀVzÀ £À£ÁߥÀÛ ¹Ã£À.
    

qÁ|| J¸ï.J£ï. ²æÃzsÀgÀ
£ÀA. 228, 4£Éà CqÀØgÀ¸ÉÛ, 4£Éà ªÀÄÄRågÀ¸ÉÛ
gÁªÀiÁAd£ÉÃAiÀÄ£ÀUÀgÀ, aPÀÌ®è¸ÀAzÀæ,

¨ÉAUÀ¼ÀÆgÀÄ- 5600 61

ಪ್ರೀತಿಯ ಹಕ್ಕು

ಪ್ರೀತಿಯ ಹಕ್ಕು

          ಸರಿತಾ-ಸಾವಂತ ಇಬ್ಬರೂ ಅನ್ಯೋನ್ಯ ದಂಪತಿಗಳು. ಸಹಪಾಠಿಗಳಾಗಿದ್ದಾಗಲೇ ಪ್ರೇಮಿಸಿ ಮದುವೆಯಾದವರು. ಸರಿತಾಗೆ ಶನಿವಾರ ವಿಶೇಷ. ಅಂದು ಏನೇ ಆದರೂ ದುಡಿಯುವ ಸತಿಪತಿಗಳಿಬ್ಬರೂ ಯಾವುದಾದರೂ ಹೋಟೆಲಿನಲ್ಲಿ ತಿಂದು ಮನೆಗೆ ಹೋಗುವ ರೂಢಿ. ಹಾಗೇ ಈ ಶನಿವಾರವೂ ಅವರು ಅಫೀಸಿನಿಂದ ಮರಳುವ ದಾರಿಯಲ್ಲಿ ಸಿಕ್ಕ ಒಂದು ಸಾಧಾರಣ ಹೋಟೆಲ್ಲಿಗೆ ನುಗ್ಗಿದರು. ಎದುರು-ಬದುರು ಕುಳಿತು ಭಾನುವಾರದ ಕೆಲಸ-ಕಾರ್ಯ, ಔಟಿಂಗ್ ಇತ್ಯಾದಿ ಮಾತನಾಡುತ್ತಾ ಎರಡು ಮಸಾಲೆ ದೋಸೆ ತರಲು ಹೇಳಿ ರಿಲಾಕ್ಸ್ ಆಗೆ ಕುಳಿತರು.
          ಆಗಲೇ ಆ ವಿಚಿತ್ರ ಸಂಸಾರ ಅದೇ ಹೋಟೆಲ್ಲಿಗೆ ಬಂದಿದ್ದು. ಮುಂದೆ ಬಂದ ಪುರುಷನ ಮುಖ ಸಿಡುಬಿನ ಕಲೆಯಿಂದ ವಿಕಾರವಾಗಿತ್ತು. ಅದನ್ನು ಮುಚ್ಚಿಡಲು ಸ್ವಲ್ಪ ಸ್ವಲ್ಪ ಬೆಳೆದ ಕುರುಚಲು ಗಿಡ ಬಿಟ್ಟಿದ್ದ. ಅವನ ಹಿಂದೆ ತಲೆಕೂದಲು ಕೆದರಿಕೊಂಡು ಬಂದ ಬಹುಶಃ ಅವನ ಮಗಳಾದ ಸುಮಾರು 5 ವರ್ಷದ ಹುಡುಗಿ, ಅವಳ ಹಿಂದೆ ಮಾಸಿದ ಸೀರೆ ಉಟ್ಟ, ಮತ್ತೆ ತುಂಬು ಬಸುರಿಯಾದ ಅವನ ಹೆಂಡತಿಯೆನ್ನಬಹುದಾದ ಅವಳೂ ಕಷ್ಟಪಟ್ಟು ಕಾಲಿಟ್ಟುಕೊಂಡು ಒಳಬಂದು ಎಲ್ಲರೂ ಇವರ ಪಕ್ಕದ ಟೇಬಲ್ ಗೇ ಬಂದು ಕುಳಿತರು. ಸರಿತಾ ಅವರತ್ತ ಜಿಗುಪ್ಸೆಯ ನೋಟ ಬೀರುತ್ತಾ, “ಯಾಕಾದರೂ ಇಂತಹವರು ಮದುವೆಯಾಗುತ್ತಾರೋ” ಎಂದು ಗೊಣಗಿಕೊಂಡಳು.
          ಸಾವಂತ, “ಅವರ ಪ್ರಪಂಚ ಅವರಿಗೆ ಬಿಡೇ, ಒಟ್ಟಿನಲ್ಲಿ ಜೀವನ ಮಾಡ್ತಾರಲ್ಲಾ, ಎಲ್ಲಾ ಪ್ರಾಣಿ ಪಕ್ಷಿಗಳಿಗೂ ಜೀವಿಸುವ....”
          “ಸಾಕು ನಿಲ್ಲಿಸೋ ಸಾತೂ, ನೀನಂತೂ ಕಾಲೇಜಿನ ದಿನದಿಂದಲೂ ತತ್ವ ಹೇಳಿ, ಹೇಳಿ, ನನ್ನ ಸನ್ಯಾಸಿನಿ ಮಾಡಿಬಿಡುತ್ತಿದ್ದೀಯಾ” ಎನ್ನುತ್ತಾ, ಸರಿತಾ ಅವನ ಮಾತನ್ನು ಅಲ್ಲಿಗೇ ತುಂಡರಿಸಿದಳು. “ಅಯ್ಯಪ್ಪಾ, ಇಷ್ಟು ಬೇಗ ನೀನು ಸನ್ಯಾಸಿನಿ ಆದರೆ ನನ್ನ ಗತಿ......” ಎನ್ನುತ್ತಾ ಕಣ್ಣು ಮೇಲೆ ಮಾಡಿ ತುಂಟ ನಗೆಯಲ್ಲಿ ಹುಸಿ ಆತಂಕ ತೋರಿದ ಸಾವಂತ.
          ಅಷ್ಟರಲ್ಲಿ ಅವರಿಬ್ಬರಿಗೂ ಮಸಾಲೆ ದೋಸೆ ಬಂತು. ಸರಿತಾ ನಾಜೂಕಾಗಿ ಅದನ್ನು ಬೆರಳಲ್ಲಿ ಮುರಿದು ಕೈಗೆ ತಾಗಿಯೂ ತಾಗದಂತೆ ಅದನ್ನು ಹಿಡಿದು ಚಟ್ನಿಯಲ್ಲಿ ಮೆಲ್ಲಗೆ ಸ್ವಲ್ಪವೇ ಅದ್ದಿ ಬಾಯಿಗೆ ಹಾಕಿಕೊಂಡು ತುಟಿ ಮುಚ್ಚಿಕೊಂಡು ಮೆಲ್ಲಗೆ ಅಗಿದು ತಿನ್ನತೊಡಗದಳು. ಅವಳು ಯಾವಾಗಲೂ ಹಾಗೆಯೇ. ನಯ ನಾಜೂಕು. ತಿನ್ನುವಾಗಲೂ ಬಾಯಿ ತೆರೆಯದೆಯೇ ತುಟಿ ಮುಚ್ಚಿಟ್ಟುಕೊಂಡೇ ಎದುರು ಕುಳಿತವರಿಗೆ ಸ್ವಲ್ಪವೂ ತಿಳಿಯದಂತೆ ಸೇವಿಯಬೇಕೆಂಬುದು ಅವಳ ಅಭಿಮತ. ಸಾವಂತನೋ, ತನ್ನ ಇಷ್ಟ ಬಂದಹಾಗೆ ತಿನ್ನುವವ. ದೋಸೆಯ ಹೊಟ್ಟೆ ಬಗೆದು, ಪಲ್ಯ ಹೊರತೆಗೆದು, ಸ್ವಲ್ಪ ದೋಸೆ ಮುರಿದು ಅದರಲ್ಲಿ ಸ್ವಲ್ಪ ಪಲ್ಯ ಹಿಡಿದು, ನಂತರ ಚಟ್ನಿಯಲ್ಲಿ ಅದ್ದಿ, ಸ್ವಲ್ಪ ದೊಡ್ಡದಾಗೇ ಬಾಯಿ ತೆರೆದು ಅದನ್ನು ಒಳಗೆ ಹಾಕಿಕೊಂಡು, ಚೊರ, ಚೊರ ಸದ್ದು ಮಾಡುತ್ತಾ, ಅದರ ರುಚಿಯನ್ನು ಸವಿಯುತ್ತಾ, ಕಾಲಾಡಿಸುತ್ತಾ ಕುಳಿತ. “ಈ ಹೊಟ್ಟೆಬಾಕನಿಗೆ ಎಷ್ಟು ಹೇಳಿಕೊಟ್ಟರೂ ಅಷ್ಟೆ. ಟೇಬಲ್ ಮ್ಯಾನರ್ಸ್ ಕಲಿಯಲಿಲ್ಲ” ಎಂದು ನಸುಗೋಪದಿಂದ ಗೊಣಗಿಕೊಂಡು ಸರಿತಾ, ಪಕ್ಕದ ಟೇಬಲ್ ಕಡೆ ಕಣ್ಣು ಹಾಯಿಸಿದಳು.
          ಅಲ್ಲಿ ಕುರುಚಲು ಗಡ್ಡದವ ತಾನೊಬ್ಬನೇ ಒಂದು ಉದ್ದಿನ ವಡೆಯನ್ನು ಸಣ್ಣ ಸಣ್ಣ ತುಂಡು ಮಾಡಿ ಸಾಂಬಾರಿನಲ್ಲಿ ಹೊರಳಾಡಿಸಿ ತಿನ್ನುತ್ತಿದ್ದ. ಅವನ ಮಗಳೂ, ಅವನ ಬಸುರಿ ಹೆಂಡತಿಯೂ ಅವನ ತಟ್ಟೆಯನ್ನೂ, ಅವನು ತಿನ್ನುವುದನ್ನೂ ನೋಡುತ್ತಾ ಕುಳಿತ್ತಿದ್ದರು. ಇದನ್ನು ನೋಡಿದ ಸರಿತಾಗೆ ಹೊಟ್ಟೆಯಲ್ಲಿ ಬೆಂಕಿ ಭುಗಿಲೆದ್ದಿತು. “ನಾಯಿಯಂತಹವನು!, ಮನುಷ್ಯನಾಗಲು ನಾಲಾಯಕ್ ಪ್ರಾಣಿ. ಈ ಸುಖಕ್ಕೆ ಅವರಿಬ್ಬರನ್ನು ಯಾಕೆ ಕರೆತಂದನೋ” ಎಂದು ತನ್ನೊಳಗೇ ಗೊಣಗಿಕೊಳ್ಳುತ್ತಾ ಕೋಪದಿಂದ ಮುಖ ಕೆಂಪಗೆ ಮಾಡಿಕೊಂಡು ಅಸಹಾಯಕತೆಯಿಂದ ಕುದಿಯುತ್ತಾ ಕುಳಿತಳು. ಇವೆಲ್ಲವನ್ನೂ ಕಿರುಗಣ್ಣಲ್ಲೇ ನೋಡಿದ ಸಾವಂತ ಏನೂ ಗೊತ್ತಿಲ್ಲದವನಂತೆ, ಮಾತನಾಡಿದರೆ ಉರಿ ಕಾರುವ ಸ್ಥಿತಿಯಲ್ಲಿದ್ದ ಪತ್ನಿ ಸರಿತಾಳನ್ನು ಪ್ರಚೋದಿಸದಂತೆ ತನ್ನ ಪಾಡಿಗೆ ತಾನು ಎಂಬಂತೆ ಎಲ್ಲೋ ನೋಡುತ್ತಾ ದೋಸೆ ಮುಗಿಸತೊಡಗಿದ.
          ಕುರುಚಲು ಗಡ್ಡದವ ತಿಂದುದರಲ್ಲೇ ಸ್ವಲ್ಪ ಉಳಿಸಿ ಮಗಳೆಡೆಗೆ ಚಾಚಿದ. ಅವಳು ಬೇಡವೆಂಬಂತೆ ತಲೆ ಆಡಿಸುತ್ತಾ, ಆದರೆ ಆಸೆಗಣ್ಣಿಂದ ನೋಡುತ್ತಾ, ಎರಡೂ ಕೈಯಲ್ಲಿ ಬಟ್ಟಲನ್ನು ಅವಳಪ್ಪನಿಂದ ತೆಗೆದುಕೊಂಡು ಅದರಲ್ಲಿ ಉಳಿದಿದ್ದ ವಡೆಯ ತುಂಡನ್ನು ತಿನ್ನಲಾರಂಭಿಸಿದಳು. ಇದನ್ನು ಕಂಡ ಮೇಲಂತೂ ಸರಿತಾಗೆ ತಡೆಯಾಗಲಿಲ್ಲ. “ದರಿದ್ರ ಗಂಡಸೇ!.......” ಎಂದು ಜೋರಾಗೇ ಗೊಣಗಿಕೊಂಡು, ನಿರ್ಲಿಪ್ತನಂತಿದ್ದ ತನ್ನ ಗಂಡನ ಮೇಲೇ ತನ್ನೆಲ್ಲಾ ಕೋಪವನ್ನು ತಿರುಗಿಸಿಕೊಂಡು. “ಏನೇ ಆದರೂ ಗಂಡು ಜಾತಿಗೆ ಇರುವ ಕೊಬ್ಬು,.....” ಎಂದು ಉಳಿದ ಮಾತನ್ನು ನುಂಗಿಕೊಂಡಳು.
          ಸಾವಂತ್, “ಸಾರಿ....., ನಿನಗೆಷ್ಟು ಸಲ ಹೇಳಿದ್ದೇನೆ. ಡೋಂಟ್ ಜಂಪ್ ಟು ಕನ್ ಕ್ಲೂಷನ್. ಯಾವಾಗಲೂ,ಯೊಚನೆ ಮಾಡಿ .....” ಇನ್ನೂ ಅವನ ಮಾತು ಮುಗಿಯುವ ಮುನ್ನ ಸರಿತಾ ಏನೋ ಹೇಳಲು ದೊಡ್ಡದಾಗಿ ಬಾಯಿ ತೆಗೆದಳು. ಅಷ್ಟರಲ್ಲಿ ಸಾವಂತ್, ’ಈಗ ನೋಡು’ ಎನ್ನುವಂತೆ ಪಕ್ಕದ ಟೇಬಲ್ ಕಡೆ ಸನ್ನೆ ಮಾಡಿ ತೋರಿದ. ಈಗ ಪಕ್ಕದ ಟೇಬಲ್ ಗೂ ಎರಡು ಪ್ಲೇಟ್ ಮಸಾಲೆ ದೋಸೆ ಬಂದಿಳಿದ್ದಿದ್ದವು. ಒಂದನ್ನು ಆ ಮಗಳೂ, ಇನ್ನೊಂದನ್ನು ಆ ತುಂಬಿದ ಬಸುರಿಯೂ ತಿನ್ನಲು ತೊಡಗಿದರು. ಅಷ್ಟರಲ್ಲಿ ಪುಟ್ಟ ಮಗಳು ತನ್ನ ತಟ್ಟೆಯಲ್ಲಿದ್ದ ದೋಸೆಯಲ್ಲಿ ಒಂದು ಚೂರನ್ನು ಮುರಿದು ಕುರುಚಲು ಗಡ್ಡದ ಅಪ್ಪನಿಗೆ ಒತ್ತಾಯ ಮಾಡಿ ಅವನ ಬಾಯಲ್ಲಿ ಇಟ್ಟಳು. ಆತ, ಅದರಲ್ಲೇ, ಅರ್ಧ ಹಾಗೇ ಹಲ್ಲಲ್ಲಿ ಕಚ್ಚಿ, ಇನ್ನರ್ಧ ತನ್ನ ಹೆಂಡತಿಯ ಬಾಯಿಗೆ ಹಾಕುತ್ತಾ, “ನಿಮ್ಮಮ್ಮನಿಗೇ ಮಸಾಲೆ ದೋಸೆ ಎಂದರೆ ಇಷ್ಟ. ಅವಳಿಗೇ ಬಯಕೆ...”, ನಸುನಗುತ್ತಾ ಮಗಳ ಮತ್ತು ಹೆಂಡತಿಯ ಕಡೆಗೆ ತೃಪ್ತಿಯ ನಗೆ ಬೀರಿದ.
          “ನಿನಗೂ ಮಸಾಲೆ ದೋಸೆ ಇಷ್ಟ ಅಲ್ವಾ, ನೀನೂ ಅದನ್ನೇ ಹೇಳಬಹುದಿತ್ತಲ್ವಾ ಅಪ್ಪಾ...” ರಾಗ ಎಳೆದಳು ಮಾಸಿದ ಬಟ್ಟೆಯ  ಕೆದರಿದ ಕೂದಲಿನ ಮಗಳು. ತೃಪ್ತಿಯ ನಗೆಯ ಬೀರುತ್ತಿದ್ದ ಕುರುಚುಲು ಗಡ್ಡದವನ ಮುಖದಲ್ಲಿ ನಿಧಾನವಾಗಿ ಗೆರೆಗಳು ಸಡಿಲವಾಗಿ, ಸ್ವಲ್ಪ ಸ್ವಲ್ಪವೇ ಬದಲಾಗಿ, ವಕ್ರವಾಗಿ ಚಿಂತೆಯ ತೀರ್ವತೆಯನ್ನು ತೋರಿಸಿಕೊಳ್ಳುತ್ತಿದ್ದಂತೇ ಆತ ಮೆಲ್ಲನುಸುರಿದ, “ಇವತ್ತು ಇಷ್ಟೇ ಆಗೋದು!.....” ಆತನ ಕೈಗಳು ತನ್ನರಿವಿಲ್ಲದಂತೆ ಖಾಲಿ ಜೇಬನ್ನು ಸವರಿದವು. ಸಾವಂತ್ ಸರಿತಾಳತ್ತ ತಿರುಗಿ ನೋಡಿದ. ಸರಿತಾ, ಬಾಯಿತೆಗೆದು ಕುಳಿತು, ನಂಬಲಾರದವಳಂತೆ, ಗರಬಡಿದವಳಂತೆ ಆ ಸಂಸಾರವನ್ನೇ ನೋಡುತ್ತಿದ್ದಳು.

----ಡಾ. ಎಸ್.ಎನ್. ಶ್ರೀಧರ

ಸೊಳ್ಳೆ ಬ್ಯಾಟು

¸ÉƼÉî ¨ÁålÄ

EªÀvÀÄÛ ¸ÉƼÉî ¨ÁålÄ ªÀÄjÃzÉ vÀjæÔ, D¦üùUÉ ºÉÆgÀmÁUÀ ªÀÄqÀ¢AiÀÄ ºÀÄPÀÄA. £ÀªÀÄä EArAiÀiÁ nÃA ºÁå¥ÀÅ ªÉÆÃgÉ ºÁPÀÌAqÀÄ «±ÀéPÀ¥ï ¹Ãjøï¤AzÀ a¥ÀÅöà vÀUÉÆAqÀÄ §AzÀ ªÉÄÃ¯É ªÀÄUÀ£À QæPÉmï ºÀÄZÀÄÑ ClÖ ºÀwÛ, ¨ÁålÄ, ¨Á®Ä ªÀÄÆ¯É ¸ÉÃjzÀݪÀÅ. ºÁVgÀĪÁUÀ ªÀÄvÉÛ°èAzÀ EªÀ¤UÉ ºÀÄZÀÄÑ ºÀwÛvÀÄ CAvÀ D±ÀÑAiÀÄð DAiÀÄÄÛ. EzÉãÉÃ, ªÀÄvÉÛ ¨ÁålÄ? ªÀÄUÀ QæPÉmï CqÉÆîè CAvÀ ±À¥ÀxÀ ªÀiÁrzÀÝ CAzÉ. CAiÉÆåà ¤ÃªÉÇAzÀÄ! CªÀ¤UÀ¯ÁèjÃ, ¸ÉƼÉîUÉ .... CAzÀ¼ÀÄ. D¦üùUÉ ºÉÆgÀl CªÀ¸ÀgÀzÀ UÀ½UÉAiÀįÉèà EAvÀºÀ CzsÀðA§zsÀð ªÀiÁvÁr «avÀæ »A¸É ªÀiÁqÀĪÀ ºÀªÁå¸À EªÀ½UÉ. K£Éà CzÀÄ! ¸ÉƼÉîUÀ½UÉ QæPÉmï DrìwÛzÁÝgÀ! ºÁUÉãÁzÀgÀÆ DzÀgÉ, £ÀA EArAiÀiÁ nÃAUÉà PÀ¥ÀÅöà. £ÀA zÉñÀzÀ ¸ÉƼÉî nÃA ªÀÄÄAzÉ E£ÁåªÀ nÃA UÉ®ÄèvÉÛ! ºÉ ºÉ ºÉÃ....  ¥ÉPÀgÀ £ÀUÉ £ÀPÀÄÌ £À£ÀߪÀ¼À ªÀiÁvÀ£ÀÄß G¥ÉÃPÉë ªÀiÁr ¸ÀA¢UÀÞ¢AzÀ vÀ¦à¹PÉƼÀÄîªÀ JA¢£À vÀAvÀæPÉÌà eÉÆÃvÀÄ ©zÀÄÝ ºÉÆgÀqÀ®ÄªÁzÉ.
       F ¨Áj D vÀAvÀæ ¥sÀ°¸À°®è. ªÀÄÄAzÀr ElÖªÀ£À£ÀÄß vÀqÉzÀÄ ¤°è¸ÀĪÀ ¸À®ÄªÁV L±ÀéAiÀÄðgÁAiÀiï¼À ªÀÄÄAzÉ ¸À¯Áä£ïSÁ£ï ¤AvÀAvÉ £À£Àß ªÀÄÄAzÉAiÉÄà §AzÀÄ ¤AvÀ¼ÀÄ. CzÀgÀxÀð £Á£ÀÄ CªÀ¼À ªÀiÁvÀ£ÀÄß ¸ÀA¥ÀÇtðªÁV PÉý¹PÉÆAqÀÄ vÀPÀÌ ¨sÀgÀªÀ¸É PÉÆlÄÖ ªÀÄÄAzÉ ºÉÆÃUÀ¨ÉÃPÉA§ C°TvÀ ¤AiÀĪÀÄ. D¦üù£À®Æè, gÀ¸ÉÛAiÀÄ®Æè ¤AiÀĪÀÄ ªÀÄÄjAiÀÄ®Ä ºÉzÀgÀĪÀ £Á£ÀÄ ªÀÄ£ÉAiÀÄ°è ªÀÄÄjAiÀÄ®Ä ¸ÁzsÀåªÉÃ? ¨ÉPÀÄÌ JAzÁzÀgÀÆ ¹AºÀzÀAvÉ UÀfð¸À¯Á¢ÃvÉÃ? ªÀÄÄR ºÀļÀîUÉ ªÀiÁr ¨ÉÃUÀ ¸ÀjAiÀiÁV ºÉüÉÃ! K£ÀÄ ¨ÉÃPÁzÀgÀÆ vÀgÀÄvÉÛÃ£É «ÄAiÀiÁAªïUÀÄnÖzÉ. LzÀÄ ¤«ÄµÀzÀ°è CªÀ¼ÀÄ ºÉý¢ÝµÀÄÖ. ¸ÉƼÉî ºÉÆqÉAiÀÄ®Ä ºÉƸÀ jÃwAiÀÄ §¯É EgÀĪÀ J¯ÉQÖçPï ¨Áåmï §A¢zÉ. ªÉƨÉÊ¯ï ¥sÉÇä£ÀAvÉ bÁeïð ªÀiÁrlÄÖPÉÆAqÀÄ ¸ÉƼÉî ªÉÄÃ¯É ©Ã¹zÀgÉ ¸ÉƼÉîUÉ ¸ÀܼÀzÀ¯Éèà ¸ÀéUÀð PÁt¸À§ºÀÄzÀÄ. ¥ÀPÀÌzÀ ªÀÄ£ÉAiÀĪÀgÀÄ EzÀgÀ ¸ÀºÁAiÀÄ¢AzÀ ¸ÉƼÉî ¸ÀAºÁgÀ AiÀÄdÕ PÉÊUÉÆAqÀÄ CzÀgÀ ¸ÀÄ¥sÀ®¢AzÀ d£Àäd£ÁäAvÀgÀUÀ¼À PÀªÀÄðUÀ¼É®èªÀÇ PÀ¼ÉzÀÄ, ¸ÀªÀð¸ÀÄR¢AzÀ, DAiÀÄÄgÁgÉÆÃUÀå¢AzÀ, D£ÀAzÀ¢AzÀ fêÀ£À ªÀiÁqÀÄwÛzÁÝgÉ. CªÀgÀÄ ¸ÀÄRªÁVzÀÝ ªÉÄÃ¯É £ÁªÁåPÉ EgÀ¨ÁgÀzÀÄ? DUÀ° EAzÀÄ RArvÁ vÀgÀÄvÉÛÃ£É JAzÀÄ ¨sÀgÀªÀ¸É ¤Ãr, zÁj ¸ÀÄUÀªÀÄUÉƽ¹PÉÆAqÀÄ ºÉÆgÀmÉ.     
       ¸ÀAeÉ D¦üù¤AzÀ ºÉÆgÀl ªÉÄÃ¯É ªÀÄgÉAiÀÄzÉà ¥sÁå¤ì¸ÉÆÖÃjUÉ ºÉÆÃV F ºÉƸÀ ¸ÀAºÁgÀ C¸ÀÛçªÀ£ÀÄß CzÀgÀ ¥ÀæAiÉÆÃUÀªÀ£ÀÄß PÉý w½zÀÄ PÉÆAqÀÄ vÀAzÉ. ¨É¯É ªÀiÁvÀæ §ºÀ¼À C¤ß¹vÀÄ. DzÀgÉ, ªÀÄ£ÉAiÉÆqÀwAiÀÄ ªÀÄ£À«AiÀÄ£ÀÄß (DeÉÕAiÀÄ£ÀÄß) ºÁUɯÁè zÀÄrؤAzÀ C¼ÉAiÀĨÁgÀzÉA§ ¸ÀvÀåªÀ£ÀÄß FUÁUÀ¯Éà C£ÀĨsÀªÀ¢AzÀ PÀAqÀÄPÉÆArzÀÝ £Á£ÀÄ, ªÀÄ£ÉAiÀÄ ±ÁAw PÁ¥ÁqÀ¯ÉÆøÀÄUÀ CzÉà ¨É¯ÉUÉ PÉÆAqÀÄ vÀAzÉ. §¹ìUÉ £ÀqÉzÀÄ §gÀĪÁUÀ ¥sÀÅmï¥Áw£À°è PÀÆqÀ EAxÀ ¨ÁålÄUÀ¼À£ÀÄß ªÀiÁgÀ®Ä ElÄÖPÉÆArzÀÝgÀÄ. ¸ÀĪÀÄä£É PÀÄvÀƺÀ®PÉÌ ¨É¯É PÉýzÀgÉ £Á£ÀÄPÉÆlÖ ¨É¯ÉAiÀÄ CzsÀð ¨É¯É ºÉýzÀgÀÄ. JzÉ zsÀ¸ÀPÉÌA¢vÀÄ. zÀĨÁj ¨É¯É PÉÆlÄÖ PÉÆArzÀÝPÀÌ®è! £Á£ÀÄ PÉÆlÖ ¤d ¨É¯ÉAiÀÄ£Éßà ªÀÄqÀ¢AiÀÄ ªÀÄÄAzÉ ºÉýzÀÝgÉ DUÀ§ºÀÄzÁVzÀÝ PÀÄgÀÄPÉëÃvÀæªÀ£ÀÄß £É£É¹PÉÆAqÀÄ. ¸ÀzsÀå §ZÁªÁzÉ JAzÀÄPÉÆAqÀÄ, ºÉƸÀ ¨É¯ÉAiÀÄ ¨Á¬Ä¥ÁoÀ ªÀiÁrPÉÆAqÀÄ ºÉÆgÀmÉ.   
       ªÀÄ£ÉUÉ C£Àw zÀÆgÀ¢AzÀ¯Éà £ÉÆÃrzÀ ªÀÄUÀgÁAiÀÄ Nr§AzÀÄ £À£Àß PÉÊ°zÀÝ ¸ÉƼÉî¨Áål£ÀÄß QvÀÄÛPÉÆAqÀÄ CzÀgÀ ¸ÀªÁðAUÀ ¥ÀjÃPÉë ªÀiÁqÀ®Ä ªÀÄ£ÉAiÉƼÀUÉ NrzÀ. £Á£ÀÄ ªÀÄ£É vÀ®Ä¥ÀŪÀµÀÖgÀ¯Éèà vÁ£Éà CzÀgÀ C£ÉéõÀPÀ J£ÀÄߪÀ jÃwAiÀÄ°è, L£ï¸ÉÖöÊ£ï ¸ÉÖöÊ°£À°è CzÀ£ÀÄß ºÉÃUÉ G¥ÀAiÉÆÃV¸À¨ÉÃPÉA§ÄzÀ£ÀÄß vÀ£Àß vÁ¬ÄUÉ «ªÀj¹ ªÀgÀ¢ ªÀiÁqÀÄwÛzÀÝ.  CªÀ£ÀªÀÄä ¤Ã£Éà CzÀ£ÀÄß ¸ÀjAiÀiÁV ElÄÖPÉÆAqÀÄ G¥ÀAiÉÆÃV¸ÀÄ, C¥Àà¤UÉ PÉÆqÀ¨ÉÃqÀ CAvÀ ¨ÉÆÃzsÀ£É ªÀiÁqÀÄwÛzÀݼÀÄ. ¹lÄÖ £ÉwÛUÉÃjzÀgÀÆ ¨Á¬ÄUÉ, vÉÆýUÉ Kj¸À¯ÁUÀzÉà E½¹PÉÆAqÉ. ªÉÆ£Éß vÁ£Éà ºÀ¼É QÃ-PÉÆqÀĪÀ UÉÆÃqÉ-UÀrAiÀiÁgÀ j¥ÉÃjUÉAzÀÄ ©aÑzÀݪÀ£ÀÄ eÉÆÃr¸À¯ÁUÀzÉà PÀaðæü£À°è J¯Áè ©r¨sÁUÀUÀ¼À£ÀÄß PÀnÖPÉÆAqÀÄ CAUÀrAiÀĪÀ£À ªÀÄÄAzÉ ¸ÀÄjzÀÄ CªÀ£À PÉÊPÁ®Ä »rzÀÄ j¥ÉÃj ªÀiÁr¹ vÀA¢zÀÄÝ £É£É¹PÉÆAqÀÄ, F ¸ÉƼÉî¨Áån£À ¸ÀºÀªÁ¸ÀªÉà ¨ÉÃqÀªÉAzÀÄPÉÆAqÀÄ ¸ÀĪÀÄä£ÁzÉ.
       ¨Áål£ÀÄß ¸Àé®à ºÉÆvÀÄÛ bÁeïð ªÀiÁrzÀ ªÀÄUÀ PÀëwæAiÀÄgÀ ¸ÀAºÁgÀPÉÌ ºÉÆgÀl ¥ÀgÀ±ÀÄgÁªÀÄ£ÀAvÉ ªÀÄ£ÉAiÀÄ°èzÀÝ ¸ÀªÀĸÀÛ¸ÉƼÉî ¸ÀªÀÄƺÀzÀ ¸ÀAºÁgÀ ªÀævÀ PÉÊUÉÆAqÀÄ ¨ÉqïgÀƫĤAzÀ »rzÀÄ ¨ÁvïgÀÆ«Ä£ÀªÀgÉUÉ NqÁqÀvÉÆqÀVzÀ. bÀmï, bÀmï, . . . bÀnïï’, ¸Á¸ÀÄªÉ MUÀÎgÀuÉ ºÁQzÀAvÉ ±À§Ý. E¯ÉQÖçPï ¨Áån£À §¯ÉAiÉƼÀUÉ ¹QÌ©zÀÝ ¸ÉƼÉîUÀ¼ÀÄ ±ÁPï ºÉÆqɹPÉÆAqÀÄ ¸ÀvÀÄÛ ©Ã¼ÀÄwÛzÀݪÀÅ. £À£ÀߪÀ¼ÀÄ, ¸ÉÃqÀÄ wÃj¹PÉƼÀÄîªÀ ZÁtÄPÀå£ÀÄ ZÀAzÀæUÀÄ¥ÀÛ£À£ÀÄß PÀgÉzÀÄPÉÆAqÀÄ CªÀ¤UÉ ¤zÉðñÀ£À ªÀiÁqÀÄwÛzÀÝAvÉ, C°è, C°è..., ©qÀ¨ÉÃqÀ, ºÉÆr..., E°è §AvÀÄ..., C°è ºÉÆìÄvÀÄ.... CAvÀ qÉÊgÀPÀÖgïVj ªÀiÁqÀÄwÛzÀݼÀÄ. ªÀÄUÀ vÀ£Àß ¥ËgÀĵÀªÀ£É߯Áè zsÁgÉ JgÉzÀÄ ªÀiÁvÀȪÁPÀå ¥Àj¥Á®£ÉUÉ E½¢zÀÝ. MªÉÆäAªÉÄäUÉà C£ÉÃPÀ ¸ÉƼÉîUÀ¼ÀÄ AiÀĪÀÄ¥ÀÅjUÉ ºÉÆgÀnzÀݪÀÅ.   
       ªÉÆzÀªÉÆzÀ®Ä bÀmï, bÀmï, . . . bÀnÃ¯ï ±À§Ý »A¸ÁvÀäPÀªÁVzÉ C¤ß¹zÀgÀÆ, »vÀªÁUÀvÉÆqÀVvÀÄ. F PÀÄëzÀæ fëUÀ¼ÀÄ PÉÆqÀÄwÛzÀÝ »A¸É £É£É¹PÉÆAqÀÄ CªÀÅUÀ½UÉ DUÀÄwÛgÀĪÀ ±Á¹Û vÀPÀÄÌzÉAzÀÄ JAzÀÄPÉÆAqÉ. F ¸ÀAzÀ¨sÀðzÀ°è £ÀªÀÄädÓ ºÉüÀÄwÛzÀÝ PÀxÉ £É£À¦UÉ §AvÀÄ. »AzÉ zÉÆqÀØ ªÀÄvÀÄÛ ¸ÀtÚ JA§ E§âgÀÄ zÀgÉÆÃqÉPÉÆÃgÀgÀÄ EzÀÝgÀAvÉ. HjAzÀÆjUÉ NqÁqÀĪÀ d£ÀgÀ£ÀÄß, ªÁå¥ÁjUÀ¼À£ÀÄß ¸ÀÄ°UÉ ªÀiÁr J®èjUÉ zÀÄB¸Àé¥ÀߪÁVzÀÝgÀAvÉ. ªÉÄʪÉÄð£À §mÉÖ ºÉÆgÀvÁV J®èªÀ£ÀÆß zÉÆÃZÀÄwzÀÝgÀAvÉ. PÁ¯Á£ÀAvÀgÀ «¢üªÀ±ÀgÁV AiÀĪÀÄ¥ÀÅjUÉ ºÉÆÃzÁUÀ, EªÀgÀ zÀĵÀÌöÈvÀåPÉÌ vÀPÀÌ ²PÉëAiÀiÁV K£À£ÀÄß ¤UÀ¢¥Àr¹zÀgÀÆ ªÀĺÁ MgÀlgÁzÀ E§âgÀÆ ºÀ¸À£ÀÄäRgÁV ²PÉë C£ÀĨsÀ«¹ §gÀÄwÛzÀÝgÀAvÉ. aAvÉUÉÆAqÀ AiÀĪÀÄgÁd£ÀÄ, avÀæUÀÄ¥ÀÛ£À §½ ¸ÀªÀiÁ¯ÉÆÃZÀ£É ªÀiÁrzÀ£ÀAvÉ. CªÀ£À ¸À®ºÉAiÀÄAvÉ EªÀj§âjUÀÆ ªÀÄvÉÛ ¸ÀvÀvÀªÁV ¨sÀÆ ¯ÉÆÃPÀzÀ°è wUÀuÉ ¸ÉƼÉîUÀ¼ÁV d£ÀäªÉwÛ d£ÀgÀ£ÀÄß PÁqÀÄvÁÛ, CªÀjAzÀ ºÉƸÀQ¹PÉÆAqÀÄ gÀPÀÛ PÁjPÉÆAqÀÄ »A¸É ¥ÀqÀÄvÁÛ ªÀÄgÀtºÉÆAzÀĪÀ ²PÉëAiÀÄ£ÀÄß «¢ü¹zÀ£ÀAvÉ. ºÁUÁV zÉÆqÀØ wUÀuÉAiÀiÁVAiÀÄÆ, ¸ÀtÚ ¸ÉƼÉîAiÀiÁVAiÀÄÆ ¸ÀvÀvÀªÁV d£ÀäªÉwÛ vÀªÀÄä vÀªÀÄä ²PÉëAiÀÄ£ÀÄß ¤gÀAvÀgÀªÁV C£ÀĨsÀ«¸ÀÄwÛgÀĪÀÅzÁV £ÀªÀÄädÓ ºÉýzÀÝ£ÀÄß PÉý aPÀ̪ÀgÁVzÀÝ £ÁªÉ¯Áè PÉÊUÉ ¹PÀÌ wUÀuÉ ¸ÉƼÉîUÀ¼À£ÀÄß ºÉƸÀQ ºÁQ AiÀĪÀÄ£À DeÉÕAiÀÄ£ÀÄß ¥Á°¹zÀ AiÀĪÀÄQAPÀgÀgÀ jÃw E®èzÀ «ÄøÉAiÀÄ£ÀÄß wgÀĪÀÅwÛzÉݪÀÅ. DUÀ¯Éà £Á£ÀÄ ClÖºÁ¸ÀzÀ £ÀUÀÄ«£À ¥ÁæQÖÃ¸ï ªÀiÁrPÉÆArzÀÄÝ.
C¢gÀ°, FUÀ ¸ÉƼÉîUÀ¼À PÁl vÀ¦à¹PÉƼÀî®Ä K£Éà ªÀiÁrzÀgÀÆ ¸ÁzsÀåªÁUÀÄwÛgÀ°®è. ¸ÉƼÉî ¥ÀgÀzÉ M¼ÀUÉ ªÀÄ®VzÀgÀÆ, ¨É½UÉÎ CµÉÆÖwÛUÉ gÀPÀÛ »Ãj, wAzÀÄ vÉÃVzÀ qÉƼÀÄîºÉÆmÉÖAiÀÄ gÁdPÁgÀtÂUÀ¼ÀAvÉ ºÉÆgÀ¼ÁqÀ®Æ DUÀzÀAvÉ ¥ÀgÀzÉUÉ ªÉÄwÛPÉÆArgÀĪÀ ºÀwÛ¥ÀàvÀÄÛ ¸ÉƼÉîUÀ¼À£ÁßzÀgÀÆ PÁtÄwÛzÉÝ. »ÃUÉà MAzÀÄ ¸ÉƼÉî vÀÄA©zÀ ºÉÆÃmɯï MAzÀgÀ°è gÁwæ ¤zÉÝ ªÀiÁr JzÀÄÝ §AzÀªÀ£ÉƧâ£À£ÀÄß ªÀÄUÀzÉƧâ PÉýzÀ£ÀAvÉ, D zÀjzÀæ ºÉÆÃmɯï£À¯è vÀÄA¨Á ¸ÉƼÉî. Cw §Ä¢ÞªÀAvÀ ¸ÉƼÉîUÀ¼ÀÄ ¨ÉÃgÉ. JµÉÖà JZÀÑgÀ ªÀ»¹zÀgÀÆ ¸ÉƼÉî¥ÀgÀzÉAiÉƼÀUÉ ºÉÃUÁzÀgÀÆ £ÀĸÀĽ gÀPÀÛ »ÃgÀÄvÀÛªÉ. ¤ÃªÀÅ CzÉíÃUÉ gÁwæ PÀ¼ÉzÀgÉÆÃ? CzÀPÉÌ DvÀ, £Á£ÀÄ CªÀPÀÆÌ §Ä¢Ý PÀ°¹zÉ. ªÉÆzÀ¯Éà ¸ÉƼÉî ¥ÀgÀzÉ E½©mÉÖ. J¯Áè ¸ÉƼÉîUÀ¼ÀÄ CzÀgÉƼÀUÉ £Á¤zÉÝãÉAzÀÄPÉÆAqÀÄ M¼ÀUÉ £ÀĸÀĽzÀªÀÅ. £ÀAvÀgÀ £Á£ÀÄ DZÉ ªÀÄ®VzÉ JAzÀ£ÀAvÉ.
E°è £ÀªÀÄä ªÀÄ£ÉAiÀÄ F R¢ÃªÀÄ ¸ÉƼÉîUÀ¼ÀÄ AiÀiÁªÀÅzÉà ºÉÆUɧwÛ, ªÀiÁåmïUÀ½UÀÆ MVÎPÉÆAqÀÄ J¯ÉèAzÀgÀ°è J°è, ºÉÃUÉAzÀgÉ ºÁV, PÀaÑ PÀaÑ »A¸É ªÀiÁqÀÄwzÀݪÀÅ. CªÀÅUÀ½ÃUÀ ¸À±À§ÝªÁV ¸ÁAiÀÄÄwÛzÀÝgÉ ªÀÄ£ÀzÉƼÀUÉà ©qÀÄUÀqÉAiÀÄ ¨sÁªÀzÀ DvÁä£ÀAzÀ. aPÀ̪À£ÁVzÁÝUÀ ¹¤ªÀiÁ mÉAmïUÀ¼À°è PÀĽvÀÄ £ÉÆÃqÀĪÀ ¹¤ªÀiÁUÀ¼À°è »ÃgÉÆà «®£ïUÀ½UÉ ZÀZÀÄѪÁUÀ, ¸ÀÆÌ°£À°è ªÉÄõÀÖgÀ ¥Àæ±ÉßUÀ½UÉ ¸Àj GvÀÛgÀ ºÉý, £ÀAvÀgÀ GvÀÛgÀ ºÉüÀ¯ÁUÀzÀ gËr ºÀÄqÀÄUÀgÀ ªÀÄÆUÀÄ »rzÀÄ PÉ£ÉßUÉ ºÉÆqÉAiÀÄÄwÛzÁÝUÀ DUÀÄwÛzÀÝ ¨sÁªÁ£ÀAzÀªÉà FUÀ®Æ DUÀvÉÆqÀVvÀÄ.
       EzÉà jÃwAiÀÄ ¨ÁålÄ ¯ÉÆÃPÁAiÀÄÄPÀÛjUÀÆ ¹QÌzÀÝgÉ, «zsÁ£À¸ËzsÀ «PÁ¸À¸ËzsÀUÀ¼À §½ ©Ã¹ AiÀiÁªÀÅzÉà PÁ£ÀƤUÀÆ ¹UÀzÉà PÉÆ©â ªÉÄgÉzÁqÀÄwÛgÀĪÀ PÉ®ªÀÅ C¢üPÁgÀ¸ÀÛ gÁdPÁgÀtÂUÀ¼À£ÀÆß, gÁdPÁgÀt ªÀiÁqÀÄvÁÛ NqÁqÀÄwÛgÀĪÀ ¨sÀæµÀÖ C¢üPÁjUÀ¼À£ÀÆß »rzÀÄ ¨Át¯É ªÉÄÃ¯É ºÀÄjzÀAvÉ ºÀÄjAiÀħºÀÄ¢vÀÄÛ. PÉÆÃmïð£À°è £ÁåAiÀĪÀÄÆwðUÀ½UÉ ¹QÌzÀÝgÉ, gÀ¸ÉÛ, qÁåA CµÉÖÃPÉ, Erà zÉñÀªÀ£Éßà £ÀÄAV ¤ÃgÀÄ PÀÄrzÀÄ vÉÃUÀĪÀ, £ÀAvÀgÀªÀÇ ZÀÄ£ÁªÀuÉUÀ¼À°è UÉzÀÄÝ ClÖºÁ¸À ªÀiÁqÀÄwÛgÀĪÀ, ªÀiÁ£ÀªÀ PÀ¼Àî¸ÁUÀuÉ ªÀiÁqÀĪÀ ¸ÀÄ¥ÀÅvÀæ-¸ÀÄ¥ÀÅwæAiÀÄgÀ£ÀÆß §¯ÉAiÉƼÀUÉ ©Ã½¹PÉÆAqÀÄ ¤£ÁðªÀÄ ªÀiÁqÀ§ºÀÄ¢vÀÄÛ. PÉÆ¯É ¸ÀÄ°UÉ ªÀiÁrAiÀÄÆ PÁ£ÀƤ£À §¯ÉAiÀÄ gÀAzsÀæUÀ¼À ªÀÄÆ®PÀ vÀ¦à¹PÉÆAqÀÄ ªÉÄgÉzÁqÀĪÀ ¹jªÀAvÀgÀ ¥ÀÅvÀægÀ£ÀÆß PÉqÀªÀ§ºÀÄ¢vÀÄÛ.
       CµÉÖÃPÉ, £À£Àß AiÀi˪À£ÀzÀ°è £Á ªÉÄaÑzÀ ºÀÄqÀÄVUÉ ¥ÉæêÀÄ ¥ÀvÀæ PÉÆqÀ®Ä CrØAiÀiÁVzÀÝ CªÀ¼À ¥ÉʯÁé£ïgÀAvÀºÀ E§âgÀÄ CtÚA¢gÀ£ÀÆß »ÃUÉà UÀÄr¹ºÁPÀ§ºÀÄ¢vÀÄÛ. DUÁUÀ ªÀÄ£ÉUÉ ¨sÉÃn ¤Ãr £À£ÀߪÀ¼À Q«AiÀÄÆzÀĪÀ £À£ÀßvÉÛAiÀÄ£ÀÆß ................. . bÀmï.....’, £À£Àß PÉʬÄAzÀ £Á£Éà £À£Àß PÉ£ÉßUÉ ºÉÆqÉzÀÄPÉÆArzÉÝ. ºÁ¼ÁzÀÄÝ ¸ÉƼÉî ºÀUÀ®ÄUÀ£À¸ÀÄ PÁt®Æ ©qÀ°®è. PÉ£ÉßUÉ §®ªÁUÉà PÀaÑvÀÄÛ. ªÀÄÄAUÉÃj¯Á®£À ¸Àé¥À߯ÉÆÃPÀ¢AzÀ ºÉÆgÀ§AzÀÄ ªÁ¸ÀÛªÀ ¨sÀÆ ¯ÉÆÃPÀPÉÌà E½¢zÉÝ. ªÀÄ£ÉAiÀÄ°è ¸ÉƼÉî ¸ÀAºÁgÀ AiÀÄdÕ ªÀÄÄAzÀĪÀgÉ¢vÀÄÛ.        

qÁ|| J¸ï.J£ï. ²æÃzsÀgÀ
£ÀA. 228, 4£Éà CqÀØgÀ¸ÉÛ, 4£Éà ªÀÄÄRågÀ¸ÉÛ
gÁªÀiÁAd£ÉÃAiÀÄ£ÀUÀgÀ, aPÀÌ®è¸ÀAzÀæ,

¨ÉAUÀ¼ÀÆgÀÄ- 5600 61